ದಾವಣಗೆರೆ: ಯಾವುದೇ ಕಾರಣಕ್ಕೂ ಅಡಿಕೆ ನಿಷೇಧ ಸಾಧ್ಯವಿಲ್ಲ. ಗುಟ್ಕಾ ನಿಷೇಧಿಸಿ ಹತ್ತು ವರ್ಷಗಳಾಗಿವೆ. ಪಾನ್ ಮಸಾಲಾದಲ್ಲಿ ತಂಬಾಕು ಮಿಶ್ರಣ ಮಾಡಲಾಗುತ್ತಿದೆಯೇ ಎಂಬ ಕುರಿತಂತೆ ಪರಿಶೀಲನೆ ನಡೆಯುತ್ತಿದೆ. ಹಿಂದಿನ ವರ್ಷ ಇದನ್ನೇ ಮಾಡಲಾಗಿತ್ತು. ಈ ಬಾರಿಯೂ ಮುಂದುವರಿಸಲಾಗಿದೆ ಅಷ್ಟೇ. ಅಡಿಕೆ ಬೆಳೆಗಾರರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಎಂದು ಮಾಜಿ ಸಂಸದ ಹಾಗೂ ಅಡಿಕೆ ವ್ಯಾಪಾರಿ ಆದ ಡಾ. ಜಿ. ಎಂ. ಸಿದ್ದೇಶ್ವರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಟ್ಕಾ ಬ್ಯಾನ್ ಮಾಡಿದ್ದೇವೆಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಅಡಿಕೆ ನಿಷೇಧ ಮಾಡಿಲ್ಲ. ವಿನಾಕಾರಣ ಗೊಂದಲ ಸೃಷ್ಟಿಸುವುದು ಬೇಡ. ಅಡಿಕೆ ಹೆಚ್ಚಾಗಿ ಬೆಳೆಯುವ ಪ್ರದೇಶಗಳಿಂದ ಒಟ್ಟು 130 ಶಾಸಕರು, ಏಳು ಸಂಸದರು ಆರಿಸಿ ಬಂದಿದ್ದಾರೆ. ಅಡಿಕೆ ನಿಷೇಧಿಸಿದರೆ ಇಡೀ ರಾಜ್ಯದಲ್ಲಿ ಹೋರಾಟ ಆಗುತ್ತದೆ. ಅಲ್ಲೋಲ ಕಲ್ಲೋಲ ಆಗುತ್ತದೆ, ರಾಜ್ಯ ಸರ್ಕಾರವೂ ಉಳಿಯಲ್ಲ ಎಂದು ಎಚ್ಚರಿಸಿದರು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ರೈತರು ಅಡಿಕೆ ಬ್ಯಾನ್ ಮಾಡ್ತಾರೆಂದು ಧೃತಿಗೆಡುವುದು ಬೇಡ. ಅಡಿಕೆ ಧಾರಣೆ ಸುಮಾರು ನಾಲ್ಕು ಸಾವಿರ ರೂಪಾಯಿ ಕಡಿಮೆಯಾಗಿದೆ. ಅಡಿಕೆ ಧಾರಣೆ ಕಡಿಮೆಯಾಗಲು ಹಲವಾರು ಕಾರಣಗಳಿವೆ. ಗುಟ್ಕಾ ನಿಷೇಧ ಮಾಡುತ್ತೇವೆಂದು ಹೇಳಿದ
ಕಾರಣಕ್ಕೆ ಧಾರಣೆ ಕಡಿಮೆಯಾಗಿಲ್ಲ. ಕಳೆದ ಮೂರು ದಿನಗಳ ಹಿಂದೆ ಒಂದು ಕೆಜಿ ಸಕ್ಕರೆ ಒಂದೇ ಬಾರಿಗೆ 70 ರೂಪಾಯಿ ಕ ಆಗಿತ್ತು. ಈಗ 42 ರೂಪಾಯಿ ಆಗಿದೆ. ಧಾರಣೆ ಹೆಚ್ಚಾದಾಗ ಹೆಚ್ಚಾಗಿ ಸಂಗ್ರಹಿಸಲಾಗುತ್ತದೆ. ಇದು ಸ್ವಾಭಾವಿಕ. ಅಡಿಕೆ ಪ್ರತಿ
ಕ್ವಿಂಟಲ್ ಗೆ ಸದ್ಯಕ್ಕೆ 48ರಿಂದ 51 ಸಾವಿರ ರೂಪಾಯಿ ಇದೆ. ಅಡಿಕೆ ನಿಷೇಧ ಆಗಲ್ಲ. ಕಳವಳ ಪಡುವುದು ಬೇಡ ಎಂದು ತಿಳಿಸಿದರು.
ಸಿಂಥೆಟಿಕ್ ಅಡಿಕೆ ಚೈನಾದಿಂದ ಬಂದಿದೆ ಎಂದು ನೋಡಿದ್ದೇನೆ. ಚೈನಾದಿಂದ ಅಡಿಕೆ ಸಿಪ್ಪೆಯೊಳಗೆ ಕೋಟಿಂಗ್ ಮಾಡಿ ಅದನ್ನು ಚೀವಿಂಗ್ ಮಾಡಿ ಮನುಷ್ಯನ ದೇಹ ಬಿಸಿಯಾಗಲು ಬಳಸುತ್ತಾರೆ ಎಂದು ಕೇಳಿದ್ದೇನೆ. ಬಣ್ಣ ಹಾಕಿ ವ್ಯಾಪಾರಸ್ಥನೊಬ್ಬ ಮಾಡಿದ್ದಾನೆ ಎಂದ ಅವರು, ಈ ಬಾರಿ ಅಡಿಕೆ ಸಂಪೂರ್ಣವಾಗಿ ಮಾರುಕಟ್ಟೆಗೆ ಬರುತ್ತಿಲ್ಲ. ಹಳ್ಳಿ ಹಳ್ಳಿಯಲ್ಲಿಯೇ ವ್ಯಾಪಾರಸ್ಥರಾಗಿಬಿಟ್ಟಿದ್ದಾರೆ. ಹೊರ ದೇಶಗಳಿಂದ ಅಡಿಕೆ ಇಲ್ಲಿಗೆ ಬರಲು ಕೇಂದ್ರ ಸರ್ಕಾರ ಅವಕಾಶ ನೀಡಬಾರದು. ನಿಗಾ ವಹಿಸಿ ಅಲ್ಲೇ ನಿಷೇಧಿಸಬೇಕು. ಯಾವುದೇ ಅಡಿಕೆಯಾದರೂ ಎಪಿಎಂಸಿ ಮೂಲಕವೇ ವ್ಯವಹಾರ ಆಗಬೇಕು. ಹಳ್ಳಿಗಳಲ್ಲಿ ವ್ಯಾಪಾರ ವಹಿವಾಟು ಹಾಕುವುದಕ್ಕೆ ಬ್ರೇಕ್ ಹಾಕಬೇಕು ಎಂದು ತಿಳಿಸಿದರು.
Leave a comment