Home ಕ್ರೈಂ ಸುದ್ದಿ ದಾವಣಗೆರೆ ಜಿಲ್ಲೆಯಾದ್ಯಂತ ಈ ದಿನಗಳಂದು ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧ!
ಕ್ರೈಂ ಸುದ್ದಿದಾವಣಗೆರೆ

ದಾವಣಗೆರೆ ಜಿಲ್ಲೆಯಾದ್ಯಂತ ಈ ದಿನಗಳಂದು ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧ!

Share
Share

ದಾವಣಗೆರೆ: ಗಣೇಶ ಚತುರ್ಥಿ ಅಂಗವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನೆಯ ವೇಳೆ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡಲು ಆಯ್ದ ದಿನಗಳಂದು ಜಿಲ್ಲೆಯಾದ್ಯಂತ ಮದ್ಯ ಮಾರಾಟ ಮತ್ತು ಸರಬರಾಜನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

ಅಬಕಾರಿ ಇಲಾಖೆ ದಾವಣಗೆರೆ ನಗರ ಉಪವಿಭಾಗದ ಪಾಲಿಕೆ ವ್ಯಾಪ್ತಿಯಲ್ಲಿ: ಸೆ.16, 18 ಮತ್ತು 22, ರಂದು ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ನಿಷೇಧಿಸಲಾಗಿದೆ.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ವ್ಯಾಪ್ತಿಯಲ್ಲಿ ಮಲೇಬೆನ್ನೂರು ಪುರಸಭೆ ವ್ಯಾಪ್ತಿ: ಸೆಪ್ಟೆಂಬರ್ 16, 18, 22, 24, 27 ರಂದು ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ನಿಷೇಧಿಸಲಾಗಿದೆ.

ಹರಿಹರ ನಗರ ವ್ಯಾಪ್ತಿ ಅಕ್ಟೋಬರ್ 4 ರಂದು ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ತನಕ ನಿಷೇಧಿಸಲಾಗಿದೆ.

ಚನ್ನಗಿರಿ ಉಪ ವಿಭಾಗದ ವ್ಯಾಪ್ತಿಯಲ್ಲಿ : ಚನ್ನಗಿರಿ ತಾಲ್ಲೂಕು, ಸೆ.22ರ ಮಧ್ಯರಾತ್ರಿಯಿಂದ ಸೆ.23 ಮಧ್ಯರಾತ್ರಿಯವರೆಗೆ.

ಚನ್ನಗಿರಿ ಪಟ್ಟಣ, ನಲ್ಲೂರು, ನಲ್ಲೂರು ಗ್ರಾಮದ ಸುತ್ತಮುತ್ತ ಹೊನ್ನಾಳಿ ಪಟ್ಟಣ ಹಾಗೂ ಸಾಸ್ವೇಹಳ್ಳಿ, ಸಾಸ್ವೇಹಳ್ಳಿ ಸುತ್ತಮುತ್ತ ಸೆ.25ರ ಮಧ್ಯರಾತ್ರಿಯಿಂದ ಸೆ.26ರ ಮಧ್ಯರಾತ್ರಿಯವರೆಗೆ.

ಚನ್ನಗಿರಿ ಪಟ್ಟಣ ನಲ್ಲೂರು, ನಲ್ಲೂರು ಗ್ರಾಮದ ಸುತ್ತಮುತ್ತ ಅಕ್ಟೋಬರ್ 1ರ ಮಧ್ಯರಾತ್ರಿಯಿಂದ ಅ.2 ಮಧ್ಯರಾತ್ರಿಯವರೆಗೆ.

ಹೊನ್ನಾಳಿ ತಾಲ್ಲೂಕು ಅ.3ರ ಮಧ್ಯರಾತ್ರಿಯಿಂದ ಅ.4ರ ಮಧ್ಯರಾತ್ರಿಯವರೆಗೆ.

ಚನ್ನಗಿರಿ ತಾಲ್ಲೂಕು ಅ.7ರ ಮಧ್ಯರಾತ್ರಿಯಿಂದ ಅ.8ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles

ಎರಡೂವರೆ ದಶಕ ಕಳಂಕರಹಿತ ಆಡಳಿತ ನೀಡಿರುವ ಮೋದಿ ಅವರೇ ಮುಂದೆಯೂ ಪ್ರಧಾನಿಯಾಗಬೇಕು: ಯಶವಂತರಾವ್ ಜಾಧವ್ ಆಶಯ

ದಾವಣಗೆರೆ: ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ 25 ವರ್ಷಗಳ ಕಾಲ ನಡೆಸಿದ...

ದಾವಣಗೆರೆ ಜನರಿಗೆ ಸಿಹಿ ಸುದ್ದಿ: ಹೊರ ಜಿಲ್ಲೆಯ ಡಿಜೆಗೆ ಪ್ರವೇಶವಿಲ್ಲ, 4 ಬಾಕ್ಸ್ ಸಾಮಾನ್ಯ ಧ್ವನಿವರ್ಧಕಗಳ ಬಳಕೆಗೆ ಅವಕಾಶ

ದಾವಣಗೆರೆ: ಜಿಲ್ಲೆಯಾದ್ಯಂತ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಕಾಪಾಡುವ ಹಿತದೃಷ್ಟಿಯಿಂದ ಗಣೇಶ ಮೂರ್ತಿಗಳು ವಿಸರ್ಜನೆಯಾಗುವವರೆಗೆ...

ಇನ್ಮುಂದೆ ಲೋಕಸಭೆಗೆ ಸ್ಪರ್ಧಿಸಲ್ಲ, ರಾಜ್ಯ ರಾಜಕಾರಣಕ್ಕೆ ಖಂಡಿತವಾಗಿಯೂ ಬರಲು ಸಿದ್ಧ: ಡಾ. ಜಿ. ಎಂ. ಸಿದ್ದೇಶ್ವರ ಅಚ್ಚರಿ ನುಡಿ!

ದಾವಣಗೆರೆ: ರಾಜ್ಯ ರಾಜಕಾರಣಕ್ಕೆ ಬರುತ್ತೇನೆ. ವಿಧಾನಸಭೆ ಚುನಾವಣೆಗೆ ಬಂದೇ ಬರಲು ಸಿದ್ಧನಾಗಿದ್ದೇನೆ. ಒಳ್ಳೆಯ ಸಮಯ ಬರಲಿ....

ಬಿಪಿ ಹರೀಶ್ ಗೆ ಕ್ಷಮೆ ಕೇಳದಿದ್ದರೆ ಎಸ್. ಎಸ್. ಮಲ್ಲಿಕಾರ್ಜುನ್ ಮನೆಗೆ ಮುತ್ತಿಗೆ ಹಾಕಲು ವಿಜಯೇಂದ್ರ ಬಂದರೆ ನಾನೂ ಹೋಗ್ತೇನೆ: ಡಾ. ಜಿ. ಎಂ. ಸಿದ್ದೇಶ್ವರ!

ದಾವಣಗೆರೆ: ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್...

ಫಾಲೋ
ಮಾಡಿ