Home ದಾವಣಗೆರೆ ಬಿಪಿ ಹರೀಶ್ ಗೆ ಕ್ಷಮೆ ಕೇಳದಿದ್ದರೆ ಎಸ್. ಎಸ್. ಮಲ್ಲಿಕಾರ್ಜುನ್ ಮನೆಗೆ ಮುತ್ತಿಗೆ ಹಾಕಲು ವಿಜಯೇಂದ್ರ ಬಂದರೆ ನಾನೂ ಹೋಗ್ತೇನೆ: ಡಾ. ಜಿ. ಎಂ. ಸಿದ್ದೇಶ್ವರ!
ದಾವಣಗೆರೆ

ಬಿಪಿ ಹರೀಶ್ ಗೆ ಕ್ಷಮೆ ಕೇಳದಿದ್ದರೆ ಎಸ್. ಎಸ್. ಮಲ್ಲಿಕಾರ್ಜುನ್ ಮನೆಗೆ ಮುತ್ತಿಗೆ ಹಾಕಲು ವಿಜಯೇಂದ್ರ ಬಂದರೆ ನಾನೂ ಹೋಗ್ತೇನೆ: ಡಾ. ಜಿ. ಎಂ. ಸಿದ್ದೇಶ್ವರ!

Share
ಜಿ. ಎಂ. ಸಿದ್ದೇಶ್ವರ
Share

ದಾವಣಗೆರೆ: ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಹರಿಹರ ಶಾಸಕ ಬಿ. ಪಿ. ಹರೀಶ್ ಕ್ಷಮೆ ಕೇಳದಿದ್ದರೆ ಸಚಿವರ ಮನೆಗೆ ಮುತ್ತಿಗೆ ಹಾಕುತ್ತೇವೆಂದು ಈಗಾಗಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ. ಅವರು ಬಂದರೆ ನಾನೂ ಕೂಡ ಭಾಗವಹಿಸುತ್ತೇನೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷರು ಬಂದರೆ ಸಹಜವಾಗಿಯೇ ನಾವೂ ಹೋಗುತ್ತೇವೆ. ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ತಿಳಿಸಿದರು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ದಾವಣಗೆರೆಯಲ್ಲಿ ನಾವು ಗುದ್ದಾಡಿಯೇ ಇಲ್ಲ. ಬಿಜೆಪಿ ಭದ್ರವಾಗಿದೆ. ಎಲ್ಲಾ ಪಕ್ಷಗಳಲ್ಲಿಯೂ ಇರುತ್ತದೆ. ನಮ್ಮಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಕಾಂಗ್ರೆಸ್ ನಲ್ಲಿ ಇಲ್ಲವಾ? ಎಲ್ಲಾ ಪಕ್ಷಗಳಲ್ಲಿಯೂ ಇದು ಸಾಮಾನ್ಯ. ಕಾರ್ಯಕರ್ತರು ಬೇಸರ ಆಗಿಲ್ಲ. ನಮ್ಮ ಹತ್ತಿರವೂ ಬರುತ್ತಾರೆ. ಅವರ ಹತ್ತಿರವೂ ಹೋಗುತ್ತಾರೆ. ನಾವೆಲ್ಲಾ ಚೆನ್ನಾಗಿದ್ದೇವೆ. ಎಲ್ಲಾ ಪಕ್ಷಗಳಲ್ಲಿಯೂ ಇದ್ದದ್ದೇ ಎಂದು ಹೇಳಿದರು.

ಇವತ್ತಿಂದ ಅಲ್ಲ. ತುಂಬಾ ವರ್ಷಗಳಿಂದಲೂ ಇದೇ ರೀತಿಯ ಪರಿಸ್ಥಿತಿ ಇದೆ. ನನ್ನನ್ನು ಮಂತ್ರಿ ಮಾಡಲಿಲ್ಲವೆಂದು ಅಧಿಕಾರದಲ್ಲಿದ್ದಾಗ ಬೇಸರ ಆಗುವುದು ಸಹಜ. ಅಧಿಕಾರ ಸಿಗದಿದ್ದಾಗ ಕೂಗಾಡುವುದು ಸಾಮಾನ್ಯ. ಕಾಂಗ್ರೆಸ್ ನಲ್ಲಿ ಇಲ್ಲವೇ. ಆಡಳಿತ ಪಕ್ಷ ವಿರೋಧ ಪಕ್ಷ ಎಂದೇನಿಲ್ಲ. ನಾವು ಮನುಷ್ಯರೇ ಅವರು ಮನುಷ್ಯರೇ. ನವೆಂಬರ್ ನಲ್ಲಿ ಸರಿಹೋಗಬಹುದಾ ಎಂಬುದನ್ನು ಕಾದು ನೋಡೋಣ. ಜೀವಂತವಾಗಿದ್ದರೆ ಖಂಡಿತಾ ನೋಡುತ್ತೇನೆ ಎಂದು ಹೇಳಿದರು.

ನಾನು ಒಬ್ಬ ರೈತ, ನಾನು ರೈತರ ಪರವಾಗಿಯೇ ಇರುತ್ತೇನೆ. ನಾನು ಯಾವಾಗಲೂ ಬ್ರೇಕಿಂಗ್ ನ್ಯೂಸ್ ಹೇಳೋದಿಲ್ಲ. ರಾಜ್ಯಮಟ್ಟದ ನಾಯಕ ಆಗಿದ್ದೆ. ಈಗ ಕೆಲವರು ಹೇಳುತ್ತಾರೆ. ಊರಿಗೆ ಓಡಿಸಲು ಯಾವನ ಕೈಯಿಂದಲೂ ಸಾಧ್ಯವಿಲ್ಲ. ಜೀವ ಇರುವವರೆಗೆ ಪಕ್ಷಕ್ಕೆ ದುಡಿಯುತ್ತೇನೆ. ಇಲ್ಲೇ ಇರುತ್ತೇನೆ ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *

Related Articles

ಇಂದಿನಿಂದ ಭದ್ರಾ ಬಲದಂಡೆ, ಎಡದಂಡೆ ಮತ್ತು ಗೊಂದಿ ನಾಲೆಯ ವಿತರಣಾ ನಾಲೆಗಳು, ಸಿದ್ದನಾಲೆಗಳ ಮೂಲಕ ನೀರು ಕೆರೆ ಮತ್ತು ಹಳ್ಳಕ್ಕೆ ಬಿಡುಗಡೆ

ದಾವಣಗೆರೆ: ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ನಿಗಧಿತ ಮಳೆಯಾಗದೇ ಇರುವುದರಿಂದ ವಿತರಣಾ ನಾಲೆಗಳಿಗೆ ನೀರನ್ನು ಹರಿಸುವ...

ದಾವಣಗೆರೆಯ ಸಿದ್ಧಗಂಗಾ ಸಂಸ್ಥೆಯಲ್ಲಿ 14 ಅಡಿ ಎತ್ತರದ ಪರಿಸರ ಸ್ನೇಹಿ ಗಣಪ

ದಾವಣಗೆರೆ: ದಾವಣಗೆರೆಯ ಶ್ರೀ ಸಿದ್ಧಗಂಗಾ ಸಂಸ್ಥೆಯಲ್ಲಿ ವಿಶಿಷ್ಠ ರೀತಿಯಲ್ಲಿ ಗಣೇಶ ಚತುರ್ಥಿ ಆಚರಿಸುತ್ತಿರುವುದು ನಗರದ ಮನೆ...

ಎರಡೂವರೆ ದಶಕ ಕಳಂಕರಹಿತ ಆಡಳಿತ ನೀಡಿರುವ ಮೋದಿ ಅವರೇ ಮುಂದೆಯೂ ಪ್ರಧಾನಿಯಾಗಬೇಕು: ಯಶವಂತರಾವ್ ಜಾಧವ್ ಆಶಯ

ದಾವಣಗೆರೆ: ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ 25 ವರ್ಷಗಳ ಕಾಲ ನಡೆಸಿದ...

ದಾವಣಗೆರೆ ಜನರಿಗೆ ಸಿಹಿ ಸುದ್ದಿ: ಹೊರ ಜಿಲ್ಲೆಯ ಡಿಜೆಗೆ ಪ್ರವೇಶವಿಲ್ಲ, 4 ಬಾಕ್ಸ್ ಸಾಮಾನ್ಯ ಧ್ವನಿವರ್ಧಕಗಳ ಬಳಕೆಗೆ ಅವಕಾಶ

ದಾವಣಗೆರೆ: ಜಿಲ್ಲೆಯಾದ್ಯಂತ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಕಾಪಾಡುವ ಹಿತದೃಷ್ಟಿಯಿಂದ ಗಣೇಶ ಮೂರ್ತಿಗಳು ವಿಸರ್ಜನೆಯಾಗುವವರೆಗೆ...

ಫಾಲೋ
ಮಾಡಿ