ದಾವಣಗೆರೆ: ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಹರಿಹರ ಶಾಸಕ ಬಿ. ಪಿ. ಹರೀಶ್ ಕ್ಷಮೆ ಕೇಳದಿದ್ದರೆ ಸಚಿವರ ಮನೆಗೆ ಮುತ್ತಿಗೆ ಹಾಕುತ್ತೇವೆಂದು ಈಗಾಗಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ. ಅವರು ಬಂದರೆ ನಾನೂ ಕೂಡ ಭಾಗವಹಿಸುತ್ತೇನೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷರು ಬಂದರೆ ಸಹಜವಾಗಿಯೇ ನಾವೂ ಹೋಗುತ್ತೇವೆ. ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ತಿಳಿಸಿದರು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ದಾವಣಗೆರೆಯಲ್ಲಿ ನಾವು ಗುದ್ದಾಡಿಯೇ ಇಲ್ಲ. ಬಿಜೆಪಿ ಭದ್ರವಾಗಿದೆ. ಎಲ್ಲಾ ಪಕ್ಷಗಳಲ್ಲಿಯೂ ಇರುತ್ತದೆ. ನಮ್ಮಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಕಾಂಗ್ರೆಸ್ ನಲ್ಲಿ ಇಲ್ಲವಾ? ಎಲ್ಲಾ ಪಕ್ಷಗಳಲ್ಲಿಯೂ ಇದು ಸಾಮಾನ್ಯ. ಕಾರ್ಯಕರ್ತರು ಬೇಸರ ಆಗಿಲ್ಲ. ನಮ್ಮ ಹತ್ತಿರವೂ ಬರುತ್ತಾರೆ. ಅವರ ಹತ್ತಿರವೂ ಹೋಗುತ್ತಾರೆ. ನಾವೆಲ್ಲಾ ಚೆನ್ನಾಗಿದ್ದೇವೆ. ಎಲ್ಲಾ ಪಕ್ಷಗಳಲ್ಲಿಯೂ ಇದ್ದದ್ದೇ ಎಂದು ಹೇಳಿದರು.
ಇವತ್ತಿಂದ ಅಲ್ಲ. ತುಂಬಾ ವರ್ಷಗಳಿಂದಲೂ ಇದೇ ರೀತಿಯ ಪರಿಸ್ಥಿತಿ ಇದೆ. ನನ್ನನ್ನು ಮಂತ್ರಿ ಮಾಡಲಿಲ್ಲವೆಂದು ಅಧಿಕಾರದಲ್ಲಿದ್ದಾಗ ಬೇಸರ ಆಗುವುದು ಸಹಜ. ಅಧಿಕಾರ ಸಿಗದಿದ್ದಾಗ ಕೂಗಾಡುವುದು ಸಾಮಾನ್ಯ. ಕಾಂಗ್ರೆಸ್ ನಲ್ಲಿ ಇಲ್ಲವೇ. ಆಡಳಿತ ಪಕ್ಷ ವಿರೋಧ ಪಕ್ಷ ಎಂದೇನಿಲ್ಲ. ನಾವು ಮನುಷ್ಯರೇ ಅವರು ಮನುಷ್ಯರೇ. ನವೆಂಬರ್ ನಲ್ಲಿ ಸರಿಹೋಗಬಹುದಾ ಎಂಬುದನ್ನು ಕಾದು ನೋಡೋಣ. ಜೀವಂತವಾಗಿದ್ದರೆ ಖಂಡಿತಾ ನೋಡುತ್ತೇನೆ ಎಂದು ಹೇಳಿದರು.
ನಾನು ಒಬ್ಬ ರೈತ, ನಾನು ರೈತರ ಪರವಾಗಿಯೇ ಇರುತ್ತೇನೆ. ನಾನು ಯಾವಾಗಲೂ ಬ್ರೇಕಿಂಗ್ ನ್ಯೂಸ್ ಹೇಳೋದಿಲ್ಲ. ರಾಜ್ಯಮಟ್ಟದ ನಾಯಕ ಆಗಿದ್ದೆ. ಈಗ ಕೆಲವರು ಹೇಳುತ್ತಾರೆ. ಊರಿಗೆ ಓಡಿಸಲು ಯಾವನ ಕೈಯಿಂದಲೂ ಸಾಧ್ಯವಿಲ್ಲ. ಜೀವ ಇರುವವರೆಗೆ ಪಕ್ಷಕ್ಕೆ ದುಡಿಯುತ್ತೇನೆ. ಇಲ್ಲೇ ಇರುತ್ತೇನೆ ಎಂದು ಹೇಳಿದರು.
Leave a comment