Home ದಾವಣಗೆರೆ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥ ಭವ್ಯ ಸಮಾಧಿ ಸ್ಥಳ: ಶಾಸ್ರ್ತೋಕ್ತವಾಗಿ ಭೂಮಿಪೂಜೆ ನೆರವೇರಿಸಿದ ಮೊಮ್ಮಗ ಸಮರ್ಥ್ ಶಾಮನೂರು
ದಾವಣಗೆರೆ

ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥ ಭವ್ಯ ಸಮಾಧಿ ಸ್ಥಳ: ಶಾಸ್ರ್ತೋಕ್ತವಾಗಿ ಭೂಮಿಪೂಜೆ ನೆರವೇರಿಸಿದ ಮೊಮ್ಮಗ ಸಮರ್ಥ್ ಶಾಮನೂರು

Share
ದಾವಣಗೆರೆ
Share

ದಾವಣಗೆರೆ: ನಗರದ ಕಲ್ಲೇಶ್ವರ ಮಿಲ್ ಆವರಣದಲ್ಲಿ ಲಿಂಗೈಕ್ಯರಾದ ಡಾ. ಶಾಮನೂರು ಶಿವಶಂಕರಪ್ಪ ಅಪ್ಪಾಜಿ ಅವರ ಸ್ಮರಣಾರ್ಥ ಸಮಾಧಿ ಸ್ಥಳವನ್ನು ನಿರ್ಮಿಸುವುದಕ್ಕೆ ಭೂಮಿಪೂಜೆಯನ್ನು ಶಾಸಕ ಸಮರ್ಥ್ ಶಾಮನೂರು ನೆರವೇರಿಸಿದರು.

ಪೂಜಾ ಕೈಂಕರ್ಯಗಳ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸಮರ್ಥ್ ಶಾಮನೂರು, “ಅಪ್ಪಾಜಿಯವರು ಕೇವಲ ಒಬ್ಬ ರಾಜಕಾರಣಿಯಾಗಿರಲಿಲ್ಲ, ಬದಲಾಗಿ ದಾವಣಗೆರೆಯ ಶಿಕ್ಷಣ, ಕೈಗಾರಿಕೆ, ಸಮಾಜಸೇವೆ ಹಾಗೂ ಮೂಲಸೌಕರ್ಯಗಳ ಬೆಳವಣಿಗೆಯ ರೂವಾರಿಯಾಗಿದ್ದರು. ಅವರ ದೂರದೃಷ್ಟಿ ಮತ್ತು ಸಮಾಜಮುಖಿ ಚಿಂತನೆಗಳು ದಾವಣಗೆರೆಯನ್ನು ಇಂದು ರಾಜ್ಯದಲ್ಲೇ ಗುರುತಿಸುವಂತೆ ಮಾಡಿವೆ. ಅವರ ಕೊಡುಗೆಗಳು ಪ್ರತಿಯೊಬ್ಬ ನಗರವಾಸಿಯ ಮನದಲ್ಲಿ ಸದಾ ಜೀವಂತವಾಗಿರುತ್ತವೆ” ಎಂದರು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಮುಂದುವರಿದು ಮಾತನಾಡಿದ ಅವರು, “ಅಪ್ಪಾಜಿಯವರ ಆದರ್ಶಗಳು, ಸೇವಾ ಮನೋಭಾವ ಮತ್ತು ಅವರು ಹಾಕಿಕೊಟ್ಟ ದಾರಿಯು ಮುಂಬರುವ ಹೊಸ ಪೀಳಿಗೆಗೆ ಸದಾ ಪ್ರೇರಣೆಯಾಗಬೇಕು ಎಂಬ ಉನ್ನತ ಆಶಯದೊಂದಿಗೆ ಈ ಸ್ಮಾರಕ ಹಾಗೂ ಸಮಾಧಿ ಸ್ಥಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈ ಸ್ಥಳವು ಭವಿಷ್ಯದಲ್ಲಿ ಅವರ ಜನಪರ ಕಾಳಜಿಯನ್ನು ಸ್ಮರಿಸುವ ಪವಿತ್ರ ತಾಣವಾಗಲಿದೆ” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರು, ಸ್ಥಳೀಯ ಗಣ್ಯರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ಅಪ್ಪಾಜಿ ಅವರು ಸಮಾಜಸೇವೆ, ಶಿಕ್ಷಣ, ಜನಪರ ಕಾಳಜಿ ಹಾಗೂ ದಾವಣಗೆರೆಯ ಅಭಿವೃದ್ಧಿಗೆ ನೀಡಿದ ಅಪಾರ ಕೊಡುಗೆಗಳು ಸದಾ ಸ್ಮರಣೀಯ ಎಂದು ಹೇಳಿದರು.

ಶಾಮನೂರು ಶಿವಶಂಕರಪ್ಪರ ಆದರ್ಶಗಳು ಮತ್ತು ಸೇವಾ ಮನೋಭಾವ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬ ಆಶಯದೊಂದಿಗೆ ಸಮಾಧಿ ಸ್ಥಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು ಎಂದು ಸಮರ್ಥ್ ಶಾಮನೂರು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles

13 ವರ್ಷಗಳ ಸೇವೆಗೆ ಕೃತಜ್ಞತೆ: ದಾವಣಗೆರೆ ಕಾಂಗ್ರೆಸ್ ಕಾರ್ಯಕರ್ತರು, ನಾಯಕರಿಗೆ ಹೆಚ್. ಬಿ. ಮಂಜಪ್ಪ ಭಾವನಾತ್ಮಕ ಪತ್ರ

ದಾವಣಗೆರೆ: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿ ಸುದೀರ್ಘ 13 ವರ್ಷಗಳ ಕಾಲ ಸೇವೆ ಸಲ್ಲಿಸುವ...

ದಾವಣಗೆರೆ ಅಭಿವೃದ್ಧಿಗೆ ಬಿಗ್ ಬೂಸ್ಟ್: ಕರೂರು ಬಳಿ 200 ಎಕರೆ ಜಾಗದಲ್ಲಿ ಅತ್ಯಾಧುನಿಕ ಲೇಔಟ್ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್!

ದಾವಣಗೆರೆ: ದಾವಣಗೆರೆ ಮತ್ತು ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯು ಇಂದು ದಾವಣಗೆರೆಯಲ್ಲಿ ಗಣಿ...

ದಾವಣಗೆರೆ ಲೋಕಾಯುಕ್ತ ನೂತನ ಪೊಲೀಸ್ ಅಧೀಕ್ಷಕರಾಗಿ ಆ್ಯಂಟನಿ ಜಾನ್ ಅಧಿಕಾರ ಸ್ವೀಕಾರ

ದಾವಣಗೆರೆ:ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ ಆ್ಯಂಟನಿ ಜಾನ್. ಜೆ.ಕೆ ಅವರು ನೂತನವಾಗಿ ಅಧಿಕಾರ ಸ್ವೀಕರಿಸಿದ್ದಾರೆ.  ಇಲ್ಲಿಯವರೆಗೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಎಸ್. ಕೌಲಾಪೂರೆ ರವರು ವರ್ಗಾವಣೆಗೊಂಡಿದ್ದರಿಂದ, ತೆರವಾದ ಸ್ಥಾನಕ್ಕೆ ಆ್ಯಂಟನಿ ಜಾನ್. ಜೆ.ಕೆ ರವರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿತ್ತು....

ದಾವಣಗೆರೆಯ ಬಹುತೇಕ ವಾರ್ಡ್ ಗಳ ಗಣೇಶ ವಿಗ್ರಹಗಳ ತಾತ್ಕಾಲಿಕ ವಿಸರ್ಜನಾ ವ್ಯವಸ್ಥೆಗೆ ನಿಗದಿಪಡಿಸಿರುವ ಸ್ಥಳದ ಕಂಪ್ಲೀಟ್ ಡೀಟೈಲ್ಸ್!

ದಾವಣಗೆರೆ: ಸೆಪ್ಟೆಂಬರ್ 14, 16 ಮತ್ತು 18 ರಂದು  ಶ್ರೀ ಗಣೇಶ ವಿಗ್ರಹಗಳ ತಾತ್ಕಾಲಿಕ ವಿಸರ್ಜನಾ...

ಫಾಲೋ
ಮಾಡಿ