ದಾವಣಗೆರೆ: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಗೆ ಸಂಸ್ಕಾರ ಇಲ್ಲ. ಮೊದಲು ಸಂಸ್ಕಾರ ಬೆಳೆಸಿಕೊಳ್ಳಲಿ. ದರ್ಪ, ಅಹಂಕಾರ ಒಳ್ಳೆಯದಲ್ಲ, ಪ್ರಬುದ್ಧತೆ ಬೇಕು. ಅಧಿಕಾರ ಸಿಗುತ್ತೆ ಹೋಗುತ್ತೆ. ಸಾಹುಕಾರಿಕೆ ಇರುತ್ತೆ ಹೋಗುತ್ತೆ. ಬಹಳ ಶ್ರೀಮಂತರು, ಅಧಿಕಾರಿಗಳು, ದೇಶ ಮತ್ತು ರಾಜ್ಯ ಆಳಿದವರನ್ನು ನೋಡಿದ್ದೇನೆ. ಹೇಗೆ ಇದ್ದಾರೆ ಎಂದು ಯೋಚನೆ ಮಾಡಲಿ. ನಡೆ ನುಡಿ ಶಾಶ್ವತ ಎಂದು ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಎಸ್. ಮಲ್ಲಿಕಾರ್ಜುನ್ ಗೆ ಮೊದಲಿನಿಂದಲೂ ಸಂಸ್ಕಾರನೇ ಇಲ್ಲ. ಈ ಹಿಂದೆಯೇ ಹಲವು ಬಾರಿ ಹೇಳಿದ್ದೇನೆ. ನನ್ನ ವಿರುದ್ಧವೇ ಏಕವಚನದಲ್ಲಿ ಮಾತನಾಡಿದ್ದಾರೆ. ಬೇಕಾದಷ್ಟು ಬಾರಿ ವಯಸ್ಸಾದವರಿಗೆ ಯಾವ ರೀತಿ ಮಾತನಾಡಬೇಕೆಂಬ ಅರಿವೇ ಇಲ್ಲದಂತೆ ಮಾತನಾಡಿದ್ದು, ಇದು ಸರಿಯಲ್ಲ ಎಂದು ಹೇಳಿದರು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿರುವುದು ಅಕ್ಷಮ್ಯ. ಕೂಡಲೇ ಬಿ. ಪಿ. ಹರೀಶ್ ಕ್ಷಮೆಯಾಚಿಸಬೇಕು. ಈ ಮೂಲಕ ಇಡೀ ಜಿಲ್ಲೆಗೆ ಒಂದು ಒಳ್ಳೆಯ ಸಂದೇಶ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣವೇ ಕ್ಷಮೆಯನ್ನು ಕೇಳಲೇಬೇಕು. ನಾನೇನೂ ಹೋರಾಟ ಮಾಡುತ್ತೇನೆಂದು ಹೇಳುವುದಿಲ್ಲ. ಆದರೆ ಜನಪ್ರತಿನಿಧಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದು ಸರಿಯಲ್ಲ
ಎಂದು ಹೇಳಿದರು.
Leave a comment