Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.
Notification
Font ResizerAa
  • ಪ್ರಮುಖ ಸುದ್ದಿ
  • ನಮ್ಮ ದಾವಣಗೆರೆ
  • Crime News
  • Arecanut Rate
  • Crime News
  • Daily News
  • Job News
Reading: ಖಡಕ್ ಆಫೀಸರ್ ಡಿಸಿಆರ್ ಬಿ ಬಿ.ಎಸ್.ಬಸವರಾಜ್ ಕೋಟೆನಾಡಿಗೆ ವರ್ಗ
Share
Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.
Font ResizerAa
  • ಪ್ರಮುಖ ಸುದ್ದಿ
  • ನಮ್ಮ ದಾವಣಗೆರೆ
  • Crime News
  • Arecanut Rate
  • Crime News
  • Daily News
  • Job News
Search
  • ಪ್ರಮುಖ ಸುದ್ದಿ
  • ನಮ್ಮ ದಾವಣಗೆರೆ
  • Crime News
  • Arecanut Rate
  • Crime News
  • Daily News
  • Job News
Have an existing account? Sign In
Follow US
ನಮ್ಮ ದಾವಣಗೆರೆ

ಖಡಕ್ ಆಫೀಸರ್ ಡಿಸಿಆರ್ ಬಿ ಬಿ.ಎಸ್.ಬಸವರಾಜ್ ಕೋಟೆನಾಡಿಗೆ ವರ್ಗ

Davanagere Live
Last updated: February 6, 2023 10:08 am
By Davanagere Live
6 Min Read
Share
Davanagere dcrb bs basavaraj transfer chitradurga
SHARE

Davanagere News Today | Kannada news | 06-02-2023

Davanagere: ನಗರದಲ್ಲಿ ಖಡಕ್ ಆಫೀಸರ್ ಎಂದು ಹೆಸರು ಗಳಿಸಿದ್ದ ಡಿಸಿಆರ್ ಬಿ ಬಿ.ಎಸ್.ಬಸವರಾಜ್ ಅವರು ಚಿತ್ರದುರ್ಗಕ್ಕೆ ವರ್ಗಾವಣೆ ಹೊಂದಿದ್ದಾರೆ.

ಕರ್ನಾಟಕ ವಿಧಾನ ಸಭೆ ಚುನಾವಣೆ ಕಾರಣ ಪೂರ್ವ ವಲಯ ಪೊಲೀಸ್ ಇಲಾಖೆಯಲ್ಲಿ ಮುಂದುವರಿದಿದ್ದು, ಬಿ.ಎಸ್.ಬಸವರಾಜ್ ಅವರನ್ನು ಚಿತ್ರದುರ್ಗದ ಡಿಸಿಆರ್ ಬಿ ಕ್ರೈಂ ಬ್ರಾಂಚ್ ಗೆ ವರ್ಗಾವಣೆ ಮಾಡಲಾಗಿದೆ. ಇಂದರಿಂದ ನಗರದ ಪೊಲೀಸ್ ಇಲಾಖೆಯಲ್ಲಿ ಒಂದಿಷ್ಟು ಬಲ ಕುಗ್ಗಿದಂತಾಗz.

ಡಿಎಸ್ಪಿ ಬಸವರಾಜ್ ಅತೀ ಅನುಭವದ ವ್ಯಕ್ತಿಯಾಗಿದ್ದು, ಎಂತಹದ್ದೇ ಪ್ರಜರಣವಾದರೂ ಭೇದಿಸುವರು. ಎಲೆಬೇತೂರು ಮರ್ಡರ್ ಕೇಸ್, ಎರಡೂ ಕೋಟಿಗೂ ಹೆಚ್ಚು ರೈತರಿಗೆ ಹಣ, ಲೆಕ್ಕವಿಲ್ಲದಷ್ಟು ನಕಲಿ ಬಂಗಾರ ಕೇಸ್ ಹೀಗೆ ಹತ್ತಾರು ಪ್ರಕರಣವನ್ನು ಭೇದಿಸುವಲ್ಲಿ ಇವರ ಪಾತ್ರ ಪ್ರಮುಖ.

Davanagere dcrb bs basavaraj transfer chitradurga

ರೈತನಿಗೆ ನ್ಯಾಯ ಕೊಡಿಸಿದ ಪ್ರಕರಣ

ಒಂದು ಕಾಲದಲ್ಲಿ ಮ್ಯಾಂಚೆಸ್ಟರ್ ಎಂಬ ಖ್ಯಾತಿಗೆ ಒಳಗಾಗಿದ್ದ ದಾವಣಗೆರೆಯಲ್ಲಿ ಹತ್ತಿ ಬದಲು ಈಗ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ದರವೂ ಹೆಚ್ಚು, ಶ್ರಮವೂ ಕಡಿಮೆಯಾದ ಕಾರಣ ಎಲ್ಲ ರೈತರು ಮೆಕ್ಕೆಜೋಳ ಮಾರು ಹೋಗಿದ್ದಾರೆ. ಹೀಗಿರುವಾಗ ವರ್ತಕರೊಬ್ಬರಿಗೆ ರೈತರು ಮೆಕ್ಕೆಜೋಳವನ್ನು ನೀಡಿದ್ದು, ಹಣ ಮಾತ್ರ ಬಂದಿರಲಿಲ್ಲ ಆಗ ಎಂಟ್ರಿ ಕೊಟ್ಟಿದ್ದೇ ಡಿಎಸ್ಪಿ ಬಸವರಾಜ್.

Read Also: ದಾವಣಗೆರೆ: ಪತ್ರಕರ್ತೆ ಗೌರಿ ಕೊಲೆ ಪ್ರಕರಣ ಬೇಧಿಸಿದ ಅನಿಲ್‌ಗೆ ರಾಷ್ಟ್ರಪತಿ ಸೇವಾಪದಕ ಪ್ರದಾನ

ಬೇವರು ಸುರಿಸಿ ದುಡಿದ ಹಣವೆಲ್ಲಾ ವಂಚಕರ ಪಾಲಾಗಿತ್ತು. ಆಗ ಎಸ್ಪಿ ಸಿ.ಬಿ.ರಿಷ್ಯಂತ್ ಈ ಕೇಸ್ ನ್ನು ಡಿಎಸ್ಪಿ ಬಸವರಾಜ್ ಗೆ ವರ್ಗಾಯಿಸಿದರು. ಇವರು ಕೇಸ್ ತೆಗೆದುಕೊಂಡ ಮೇಲೆ ರೈತರಿಗೂ ಒಂದಿಷ್ಟು ನಂಬಿಕೆ ಬಂದಿತು. ಅನ್ನದಾತರ ಪರಿಶ್ರಮದ ದುಡ್ಡು ಎಲ್ಲೂ ಹೋಗಲ್ಲ ವಾಪಸ್ಸಾಗುತ್ತದೆ ಎಂಬ ನಂಬಿಕೆ ಮಾತ್ರ ಅವರ ಮನಸ್ಸಿನಲ್ಲಿ ದೃಢವಾಗಿತ್ತು. ಅಂದು ಕೊಂಡAತೆ ಕೇಸ್ ಫೈಲ್ ಮಾಡಿದ್ದ ಬಸವರಾಜ್ ಕೆಲವೇ ದಿನಗಳಲ್ಲಿ ವಂಚಕರನ್ನು ಹಿಡಿಯುವಲ್ಲಿ ಸಫಲರಾದರು

ಅನ್ನದಾತರ ಹೊಟ್ಟೆ ಮೇಲೆ ಹೊಡೆದು ನಾಪತ್ತೆ ಆಗಿದ್ದ ವಂಚಕರು ಖಾಕಿ ಕೈಗೆ ಸಿಕ್ಕಿ ಬಿದ್ದರು. ಅಲ್ಲದೇ ಬರೋಬ್ಬರಿ ಎರಡು ಕೋಟಿ 68 ಲಕ್ಷ ರೂಪಾಯಿ ವಶಪಡಿಸಿಕೊಂಡರು. ಪೊಲೀಸರು ಮನಸ್ಸು ಮಾಡಿದರೆ ಬೇಕಾದನ್ನು ಮಾಡಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.

ರೈತರಿಗೆ ಬರಬೇಕಾದ ಹಣ ವಸೂಲಿ

ಮೆಕ್ಕೆಜೋಳ ಮಾರಾಟ ಮಾಡಿ ಹಣಕ್ಕಾಗಿ ಪರದಾಡುತ್ತಿದ್ದ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದು, ದಾವಣಗೆರೆ ಡಿಸಿಆರ್ ಬಿ ಡಿವೈಎಸ್‌ಪಿ ಬಿ.ಎಸ್ ಬಸವರಾಜ್ ನೇತೃತ್ವದ ತಂಡ. ಇಂತಹ ತಂಡದ ಸಾಧನೆಗೆ ಪೂರ್ವ ವಲಯ ಐಜಿಪಿ ಎಸ್. ರವಿ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಿದರು. ಇದರಲ್ಲಿ ಬ್ಯಾಂಕ್ ಉದ್ಯೋಗಿ ಸೇರಿ ಆ ಆರು ಜನ ವಂಚಕರ ಬಂಧನ ಜೊತೆಗೆ ರೈತರಿಗೆ ಬರಬೇಕಾದ ಹಣ ವಸೂಲಿ ಮಾಡಿದ್ದು ವಿಶೇಷ.

ಶಿವಲಿಂಗಯ್ಯ, ಚೇತನ್ , ವಾಗೀಶ್ ಚಂದ್ರು , ಮಹೇಶ್ವರಯ್ಯ ಹಾಗೂ ಕೆನರಾ ಬ್ಯಾಂಕ್ ಉದ್ಯೋಗಿ ಶಿವಕುಮಾರ ರೈತರಿಗೆ ವಂಚನೆ ಮಾಡಿದ ಆರೋಪಿಗಳು. ಇದರಲ್ಲಿ ಚಂದ್ರ ಮತ್ತು ಶಿವಕುಮಾರರ ಬಿಟ್ಟರೇ ಉಳಿದಲ್ಲವರು ಸಂಬAಧಿಕರೇ. ಮೆಕ್ಕೆಜೋಳ ಹಂಗಾಮು ಬಂದರೆ ಸಾಕು ರೈತರ ಜಮೀನಿಗೆ ಸಾವಿರಾರು ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸುವುದು. ಆ ಮೆಕ್ಕೆಜೋಳ ತಮಿಳುನಾಡಿಗೆ ಕಳುಹಿಸುವುದು. ಇದಕ್ಕೂ ಮೊದಲು ರೈತರಿಗೆ ಹಣ ಕೊಟ್ಟು, ನಂತರ ಹಣವೇ ಬಂದಿಲ್ಲ ಎನ್ನುವುದು. ಹೀಗೆ ಸಾವಿರಾರು ರೈತರಿಗೆ ವಂಚನೆ ಮಾಡುವುದು ಇವರ ಕೆಲಸ.

ಮಾಹಿತಿ ಪ್ರಕಾರ 96 ಜನ ರೈತರ ಹಾಗೂ 29 ಜನ ವರ್ತಕರಿಂದ ಅಂದರೆ 125 ಜನರಿಂದ ಮೆಕ್ಕೆಜೋಳ ಖರೀದಿಸಿ ಕಳೆದ ಒಂದುವರೆ ವರ್ಷದಿಂದ ಹಣ ನೀಡದೇ ವಂಚಿಸಿ ತಲೆ ಮರೆಸಿಕೊಂಡಿದ್ದರು. ಇಂತವರನ್ನ ದಾವಣಗೆರೆ ನೇತೃತ್ವದ ಡಿಎಸ್ಪಿ ಬಸವರಾಜ್ ತಂಡ ಬಂಧಿಸಿತ್ತು. ಅಲ್ಕದೇ ಅವರಿಂದ ಬರೋಬರಿ 2,68,470 ರೂಪಾಯಿ ನಗದು ವಶ ಪಡಿಸಿಕೊಂಡಿದ್ದು ವಿಶೇಷ.

ಇನ್ನು ಕಳೆದುಕೊಂಡ ಹಣಕ್ಕಾಗಿ ರೈತರು ಹತ್ತಾರು ಸಲ ಹೋರಾಟ ಮಾಡಿದ್ದರು. ಪ್ರಮುಖ ಆರೋಪಿ ಶಿವಲಿಂಗಯ್ಯ ಅವರ ಮನೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದರು. ಕೆಲ ಸಲ ಹಲ್ಲೆಗೂ ರೈತರು ಮುಂದಾಗಿದ್ದರು. ಇದರಲ್ಲಿ ದಾವಣಗೆರೆ ಹಾಗೂ ಪಕ್ಕದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರೈತರೇ ಹೆಚ್ಚಾಗಿದ್ದರು. ಸದ್ಯ ಪೊಲೀಸರು ಬಿಸಿದ ಜಾಲಕ್ಕೆ ಕಿಲಾಡಿ ವಂಚಕರ ಗುಂಪು ಸಿಕ್ಕಿ ಬಿದ್ದಿದೆ. ಮೇಲಾಗಿ ದುಡ್ಡು ಸಹ ತಂದು ಒಪ್ಪಿಸಿದ್ದಾರೆ. ಇದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು, ಇದರಲ್ಲಿ ಡಿಎಸ್ಪಿ ಬಸವರಾಜ್ ನೇತೃತ್ವದ ತಂಡವೇ ಪಾತ್ರವೇ ಪ್ರಮುಖ.

ಎಲೆಬೇತೂರು ಮರ್ಡರ್ ಕೇಸ್ ಬೇಧಿಸಿದ ಡಿಎಸ್ಪಿ ಬಸವರಾಜ್

ದಾವಣಗೆರೆ ತಾಲ್ಲೂಕಿನ ಎಲೆಬೇತೂರಿನಲ್ಲಿ ಗುರುಸಿದ್ದಯ್ಯ ಮತ್ತು ಸರೋಜಮ್ಮ ವೃದ್ಧ ದಂಪತಿಯ ಕೊಲೆ ಪ್ರಕರಣವನ್ನು ಡಿಎಸ್ಪಿ ಬಸವರಾಜ್ ತಂಡ ಬೇಧಿಸಿದ್ದು ಮೂವರು ಆರೋಪಿಗಳನ್ನು ಬಂಧಿಸಿತ್ತು. ಅಲ್ಲದೇ ಆರೋಪಿಗಳಿಂದ ?9.27 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದರು.

ಜನವರಿ 24ರಂದು ರಾತ್ರಿ ವೃದ್ಧ ದಂಪತಿಯನ್ನು ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣ ಇಡೀ ದಾವಣಗೆರೆ ಬೆಚ್ಚಿ ಬೀಳಿಸಿತ್ತು. ಪ್ರಕರಣದ ತನಿಖೆ ನಡೆಸಿದ್ದ ಡಿಎಸ್ಪಿ ಬಸವರಾಜ್ ತಂಡ, ಗುರುಸಿದ್ದಯ್ಯ ಅವರಿಂದ ಸಾಲ ಪಡೆದಿದ್ದ ವ್ಯಕ್ತಿಯೇ ಕೊಲೆ ಮಾಡಿರುವುದನ್ನು ಪತ್ತೆ ಮಾಡಿತು. ಎಲೇಬೇತೂರಿನ ಕುಮಾರ್ (40), ಹರಪನಹಳ್ಳಿ ತಾಲ್ಲೂಕಿನ ಚನ್ನಾಪುರದ ಪರಶುರಾಮ್ (33), ಕೂಡ್ಲಿಗಿ ತಾಲ್ಲೂಕಿನ ಕಾಳಾಪುರದ ಮರಿಯಪ್ಪ (30) ಬಂಧಿತ ಆರೋಪಿಗಳು.

ಎಲೆಬೇತೂರಿನ ಬಂಧಿತ ಆರೋಪಿಯು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಊರಿಗೆ ಬಂದಾಗ ಗುರುಸಿದ್ದಯ್ಯ ಅವರ ಬಳಿ ತನ್ನ ಪತ್ನಿಯ 40 ಗ್ರಾಂ ಚಿನ್ನಾಭರಣ ಒತ್ತೆ ಇಟ್ಟು ?3 ಲಕ್ಷ ಸಾಲ ಪಡೆದಿದ್ದ. ತನ್ನ ಸ್ನೇಹಿತರೊಂದಿಗೆ ಉಚ್ಚಂಗಿದುರ್ಗದ ಬಳಿ ಹೋಗಿ ಜೂಜಾಡಿ ಆ ಹಣವನ್ನು ಕಳೆದುಕೊಂಡಿದ್ದ. ಸಾಲ ತೀರಿಸಲಾಗದೇ ಇರುವುದರಿಂದ ಬಡ್ಡಿ ಬೆಳೆಯುತ್ತಿತ್ತು. ಹೀಗಾಗಿ ಬೆಂಗಳೂರಿನಲ್ಲಿ ತನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಹರಪನಹಳ್ಳಿ ಹಾಗೂ ಕೂಡ್ಲಿಗಿ ತಾಲ್ಲೂಕಿನ ಸ್ನೇಹಿತರೊಂದಿಗೆ ಸೇರಿಕೊಂಡು ಗುರುಸಿದ್ದಯ್ಯ ಅವರ ಕೊಲೆಗೆ ಸಂಚು ರೂಪಿಸಿದ್ದ’ ಎಂದು ಹೇಳಿದರು.

‘ಜ.24ರಂದು ರಾತ್ರಿ 8ರ ಸುಮಾರಿಗೆ ಗುರುಸಿದ್ದಯ್ಯ ಅವರ ಮನೆಗೆ ಸ್ನೇಹಿತರೊಂದಿಗೆ ಎಲೇಬೇತೂರಿನ ಆರೋಪಿ ಬಂದಿದ್ದ. ಚಾಕುವಿನಿಂದ ಕತ್ತು ಸೀಳಿ ದಂಪತಿಯನ್ನು ಕೊಲೆ ಮಾಡಲಾಗಿತ್ತು. ಬಳಿಕ ಸರೋಜಮ್ಮ ಅವರ ಮೈಮೇಲಿನ ಒಡವೆ ಹಾಗೂ ತಾನು ಅಡವಿಟ್ಟಿದ್ದ ಒಡವೆ ಹಾಗೂ ನಗದುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಅಲ್ಲದೇ ಆರೋಪಿಗಳು ಕೃತ್ಯ ಎಸಗಿ ದೋಚಿಕೊಂಡು ಹೋಗಿದ್ದ ರೂ. 1.75 ಲಕ್ಷ ನಗದು, 188 ಗ್ರಾಂ ಬಂಗಾದ ಆಭರಣ ಸೇರಿ 9.27 ಲಕ್ಷ ಮೌಲ್ಯದ ಬಂಗಾರ–ನಗದು ಮತ್ತು ಒಂದು ಬೈಕ್ ಅನ್ನು ವಶಪಡಿಸಿಕೊಂಡಿದ್ದರು. ಅಲ್ಲದೇವಪ್ರಕರಣದ ಭೇದಿಸಿದ ತಂಡಕ್ಕೆ ಬಹುಮಾನವೂ ಸಿಕ್ತು.

ಸಾಲದ ಹಣ ತಂದ ಆಪತ್ತು

ಎಲೆಬೇತೂರಿನ ಗುರುಸಿದ್ದಯ್ಯ ದಂಪತಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕುಮಾರ್ ಬಾಲ್ಯದಿಂದಲೂ ಗುರುಸಿದ್ದಯ್ಯ ಅವರ ಮನೆಗೆ ಬಂದು ಹೋಗುತ್ತಿದ್ದ. ಲೇವಾದೇವಿ ನಡೆಸುತ್ತಿದ್ದ ಗುರುಸಿದ್ದಯ್ಯ ಅವರು ಮೊದಲಿನಿಂದಲೂ ತಮಗೆ ಪರಿಚಯ ಇದ್ದ ಕುಮಾರ್‌ಗೆ ಸಾಲ ನೀಡಿದ್ದರು. ಸಾಲ ತೀರಿಸಲಾಗದೇ ಕುಮಾರ್ ಒತ್ತಡಕ್ಕೆ ಒಳಗಾಗಿದ್ದ. ಗುರುಸಿದ್ದಯ್ಯ ಅವರ ಮನೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಗದು ಹಾಗೂ ಒಡವೆ ಇರುತ್ತದೆ ಎಂಬುದು ಕುಮಾರ್‌ಗೆ ತಿಳಿದಿತ್ತು. ವೃದ್ಧ ದಂಪತಿ ಮಾತ್ರ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ತಿಳಿದಿದ್ದ ಕುಮಾರ್, ಸ್ನೇಹಿತರೊಂದಿಗೆ ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ್ದ. ಜ. 24ರಂದು ರಾತ್ರಿ ಸ್ನೇಹಿತರೊಂದಿಗೆ ಗುರುಸಿದ್ದಯ್ಯ ಅವರ ಮನೆಗೆ ಬಂದು ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದ್ದ. ಬಳಿಕ ದಂಪತಿಯನ್ನು ಕೊಲೆ ಮಾಡಿ ಒಡವೆ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದ.

‘15 ವರ್ಷಗಳ ಹಿಂದೆ ಜೂಜಾಟ ಪ್ರಕರಣವೊಂದರಲ್ಲಿ ಕುಮಾರ್ ಆರೋಪಿಯಾಗಿದ್ದ. ಜೂಜಾಟದ ಚಟವನ್ನು ಅಂಟಿಸಿಕೊAಡಿದ್ದ ಆತ ಇದಕ್ಕಾಗಿಯೇ ಗುರುಸಿದ್ದಯ್ಯ ಅವರ ಬಳಿ ಸಾಲ ಮಾಡಿದ್ದ. ಕೊಲೆ ಮಾಡಿದ ಬಳಿಕ ಲೂಟಿ ಮಾಡಿಕೊಂಡು ಹೋಗಿದ್ದ ಹಣದಲ್ಲೂ ಸ್ನೇಹಿತರು ಜೂಜಾಡಿ ಒಂದಿಷ್ಟು ಹಣ ಕಳೆದುಕೊಂಡಿದ್ದ. ಇದನ್ನೇ ಡಿಎಸ್ಪಿ ಬಸವರಾಜ್ ನೇತೃತ್ವದ ತಂಡ ಬೆನ್ನತ್ತಿ ಮೃತ ದಂಪತಿಗಳಿಗೆ ನ್ಯಾಯ ಒದಗಿಸಿತ್ತು. ಇವೆರಡು ಡಿಎಸ್ಪಿ ಬಸವರಾಜ್ ನೇತೃತ್ವದ ತಂಡ ಹಿಡಿದ ಸ್ಯಾಂಪಲ್ ಕೇಸ್.

ಇನ್ನೂ ಹತ್ತಾರು ಕೊಲೆ ಪ್ರಕರಣವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಬಸವರಾಜ್ ಅಂತಹ ನಾಯಕತ್ವ ಇರುವ ಪೊಲೀಸ್ ಇಲಾಖೆಗೆ ಅಗತ್ಯವಿದೆ. ಒಟ್ಟಾರೆ ದಾವಣಗೆರೆ ಪೊಲೀಸ್ ಇಲಾಖೆ ಒಬ್ಬ ಉತ್ತಮ ಅಧಿಕಾರಿ ಇಲ್ಲದೇ ಅನಾಥವಾಗಿದೆ.

ಮೆಕ್ಕೆಜೋಳ ವಂಚನೆ ಸಂಬಂಧ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದವು. ಇದಕ್ಕೆ ಸಬಂಧಿಸಿದಂತೆ ಆರು ಆರೋಪಿಗಳು ಜಾಮೀನಿನ ಮೇಲೆ ಹೊರಗಡೆ ಬಂದಿದ್ದರು. ಈ ಪ್ರಕರಣಗಳ ತನಿಖೆಗೆ ಡಿಸಿಆರ್‌ಬಿ ಘಟಕದ ಡಿವೈಎಸ್‌ಪಿ ಬಿ.ಎಸ್. ಬಸವರಾಜ್ ನೇತೃತ್ವದಲ್ಲಿ 13 ಜನರ ತಂಡ ರಚಿಸಲಾಗಿತ್ತು 96 ರೈತರಿಗೆ 1.51 ಕೋಟಿ , 29 ವರ್ತಕರಿಗೆ 1.17 ಕೋಟಿ ಸೇರಿ ಒಟ್ಟು 2.68 ಕೋಟಿ ನಗದನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ .

-ಸಿ.ಬಿ.ರಿಷ್ಯಂತ್, ಎಸ್ಪಿ

English Summary: Davanagere dcrb bs basavaraj transfer chitradurga. Davanagere Live. Davanagere News. Davanagere latest News. Kannada News.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ದಾವಣಗೆರೆಲೈವ್‌ gmail

davangere.news@gmail.com

» Whatsapp Number

95903247228

TAGGED:bs basavarajchitradurgadavanagereDavanagere latest NewsDavanagere LiveDavanagere NewsdcrbKannada Newstransferಡಿಸಿಆರ್ ಬಿದಾವಣಗೆರೆಬಿ.ಎಸ್.ಬಸವರಾಜ್
Share This Article
Facebook Whatsapp Whatsapp Email Print
Davanagere Live's avatar
ByDavanagere Live
Follow:
ದಾವಣಗೆರೆಲೈವ್‌.ಕಾಂ ಕನ್ನಡ ಆನ್‌ಲೈನ್ ನ್ಯೂಸ್ ಪೋರ್ಟಲ್‌ನ ಗುರಿ, ಸ್ಥಳೀಯ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಬೆಣ್ಣೆ ನಗರಿ ದಾವಣಗೆರೆ ಜನರಿಗೆ ತಲುಪಿಸುವುದು. ಸ್ಥಳೀಯ ಮತ್ತು ಮಾಹಿತಿಪೂರ್ಣ ಸುದ್ದಿಗಳಿಗೆ ಮೊದಲ ಆದ್ಯತೆ ನೀಡುತ್ತಾ, ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿಗಳ ಜತೆಗೆ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆಗಳಿಗಾಗಿ ವಾಟ್ಸಾಪ್‌ನಲ್ಲಿ ಸಂಪರ್ಕಿಸಿ. ನಿಮ್ಮೂರಿನ ಸುದ್ದಿಗಳಿದ್ದರೆ ಇಮೇಲ್‌ ಮಾಡಿ. davanagarelive@gmail.com ಅಥವಾ davanagerelive.news@gmail.com
Previous Article State level dog show 2023 davanagere ಬೆಣ್ಣೆನಗರಿ ದಾವಣಗೆರೆಯಲ್ಲಿ ರಾಜ್ಯಮಟ್ಟದ ಡಾಗ್ ಶೋ: ತಾಕತ್ತು ತೋರಿಸಿದ ಶ್ವಾನಗಳು !
Next Article valmiki jatre 2023 cm bommai Visit ರಾಜನಹಳ್ಳಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆಗೆ ಸಕಲ ಸಿದ್ಧತೆ: ಫೆ.೯ರಂದು ಆಗಮಿಸಲಿದ್ದಾರೆ ಸಿಎಂ ಬೊಮ್ಮಾಯಿ
Leave a Comment

Leave a Reply Cancel reply

Your email address will not be published. Required fields are marked *

Gravatar profile

© 2025 Davangere Live. Newbie Techy All Rights Reserved.
Welcome Back!

Sign in to your account

Username or Email Address
Password

Lost your password?