ದಾವಣಗೆರೆ: ವನ್ಯಜೀವಿಗಳ ಸಂಚಾರ ಹೆಚ್ಚಿರುವ ಪ್ರಮುಖ ಹೆದ್ದಾರಿ ಹಾಗೂ ರಸ್ತೆಗಳಲ್ಲಿ ‘ವನ್ಯಜೀವಿ ಸಂಚಾರ ವಲಯ’ ಎಂಬ ಎಚ್ಚರಿಕೆ ನಾಮಫಲಕಗಳನ್ನು ಅಳವಡಿಸಬೇಕು. ವಾಹನ ಸವಾರರು ವೇಗ ಕಡಿಮೆ ಮಾಡಿಕೊಂಡು ಸಂಚರಿಸುವಂತೆ ಸೂಚಿಸುವ ಫಲಕಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸಚಿವ ಕೆ. ಎಸ್. ಬಸವಂತಪ್ಪ ಹೇಳಿದರು.
ಆನಗೋಡುವಿನಲ್ಲಿ ಚಿರತೆ ದಾಳಿಗೆ ತುತ್ತಾದ ಅರಣ್ಯ ಇಲಾಖೆ ಸಿಬ್ಬಂದಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾತನಾಡಿದರು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಕಾಡಿನಲ್ಲೇ ನೀರು–ಆಹಾರ ಒದಗಿಸಲು ಸೂಚನೆ:
ಕಾಡಿನಲ್ಲಿ ನೀರು ಮತ್ತು ಆಹಾರದ ಲಭ್ಯತೆ ಕಡಿಮೆಯಾಗುತ್ತಿರುವುದರಿಂದ ವನ್ಯಜೀವಿಗಳು ನಾಡಿನತ್ತ ಬರುತ್ತಿರುವ ಸಾಧ್ಯತೆ ಇದೆ. ಹೀಗಾಗಿ ಅರಣ್ಯದ ಸೂಕ್ಷ್ಮ ವಲಯಗಳನ್ನು ಗುರುತಿಸಿ ಪ್ರಾಣಿಗಳಿಗೆ ಕಾಡಿನೊಳಗೇ ಕುಡಿಯುವ ನೀರು ಮತ್ತು ಆಹಾರ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸೌರ ವಿದ್ಯುತ್ ಬೇಲಿ, ಟೆಂಚ್ ಅಳವಡಿಕೆಗೆ ನಿರ್ದೇಶನ:
ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಬರುವುದನ್ನು ತಡೆಯಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿರುವ ಪ್ರದೇಶಗಳಲ್ಲಿ ಟೆಂಚ್ ಹಾಗೂ ಸೌರ ವಿದ್ಯುತ್ ಬೇಲಿ ಅಳವಡಿಸಿ ವನ್ಯಜೀವಿಗಳ ಸಂರಕ್ಷಣೆ ಹಾಗೂ ಮಾನವ–ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಅಪಘಾತಕ್ಕೀಡಾದ ಚಿರತೆಯ ರಕ್ಷಣೆಗೆ ತೆರಳಿದ್ದ ಸಿಬ್ಬಂದಿಯ ಮೇಲೆಯೇ ಚಿರತೆ ದಾಳಿ ನಡೆಸಿರುವುದು ಅರಣ್ಯ ಪ್ರದೇಶಗಳಂಚಿನಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷದ ಗಂಭೀರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
- Anagodu NH 48 accident
- Davanagere leopard attack
- Davanagere news today.
- injured leopard rescue operation
- Karnataka forest guard attacked
- National Highway 48 wildlife
- wild animal rescue viral video
- ಅರಣ್ಯ ಸಿಬ್ಬಂದಿ ಮೇಲೆ ಚಿರತೆ ಅಟ್ಯಾಕ್
- ಆನಗೋಡು ನ್ಯಾಷನಲ್ ಹೈವೆ
- ಎನ್.ಎಚ್ 48 ಅಪಘಾತ
- ಕರ್ನಾಟಕ ನ್ಯೂಸ್
- ಚಿರತೆ ವೈರಲ್ ವಿಡಿಯೋ.
- ದಾವಣಗೆರೆ ಚಿರತೆ ದಾಳಿ
- ಮರಳಸಿದ್ದಪ್ಪ ಗಾಯ
- ವನ್ಯಜೀವಿ ರಕ್ಷಣಾ ಕಾರ್ಯಾಚರಣೆ
Leave a comment