ದಾವಣಗೆರೆ: ಗಣೇಶೋತ್ಸವ ಸಂಭ್ರಮದಿಂದ ಆಚರಿಸಿ. ಇದಕ್ಕೆ ನಮ್ಮ ಸಹಕಾರ ಇದೆ. ಆದರೆ ಬೇರೆ ಜಿಲ್ಲೆಗಳಿಂದ ಬರುವ ಡಿಜೆಗಳ ಬ್ಯಾನ್ ಮಾಡಿ ದಾವಣಗೆರೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಗಣೇಶೋತ್ಸವ ಸಂಬಂಧ ಜಿಲ್ಲಾಡಳಿತ ಭವನದ ತುಂಗಾಭದ್ರಾ ಸಭಾಭವನದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬೇರೆ ಜಿಲ್ಲೆಗಳಿಂದ ಯಾವುದೇ ಡಿಜೆಗಳನ್ನು ತರಿಸುವಂತಿಲ್ಲ. ಮುಂಬೈ, ಬೆಂಗಳೂರು ಸೇರಿದಂತೆ ಬೇರೆ ಯಾವ ಜಿಲ್ಲೆಗಳಿಂದಲೂ ಡಿಜೆಗಳನ್ನು ತರಿಸುವಂತಿಲ್ಲ. ತಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಕಳೆದ ವರ್ಷ ಡಿಜೆ ತರಿಸಿದ್ದರು. ನೀರು ಇಟ್ಟರೆ ಚೆಲ್ಲುತ್ತಂತೆ. ನೀರು ಚೆಲ್ಲುತ್ತೆ ಎಂದು ಹೇಳುತ್ತೆ ಎಂದರೆ ಯಾವ ಮಟ್ಟಿಗೆ ಎಫೆಕ್ಟ್ ಆಗಬಹುದು ಎಂದು ನೀವೇ ಊಹಿಸಿ. ರೈಲ್ವೆ ಎಂಜಿನ್ ಬಳಿ ಇರುವ ಸೌಂಡ್ ಬರುವಂತ ಪ್ರೆಸರ್ ಮಿಟ್ ಸಂಪೂರ್ಣ ನಿಷೇಧಿಸಿದ್ದೇನೆ. ಬೇರೆ ಜಿಲ್ಲೆಯಲ್ಲಿ ಸರ್ಕಾರ ಹಾಗೂ ಕೋರ್ಟ್ ಆದೇಶದಂತೆ ಕ್ರಮ ಜರುಗಿಸುತ್ತೇನೆ ಎಂದು ಹೇಳಿದರು.
ಶಾಂತಿಯುತವಾಗಿ ಜಿಲ್ಲೆಯನ್ನು ನಡೆಸಿದೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಶಾಂತಿಯುತವಾಗಿ, ವಿಜೃಂಭಣೆಯಿಂದ ಭಕ್ತಿ ಭಾವದಿಂದ ಆಗಬೇಕು ಎಂಬುದು ನನ್ನ ಕಳಕಳಿ. ವಿಸರ್ಜನೆ ಮಾಡುವ ಹಿಂದಿನ ದಿನ ವಾಹನ ಬೇಕಾದರೆ ತಿಳಿಸಿ. ಗ್ರಾಮಾಂತರ ಮಟ್ಟದಲ್ಲಿ ಕೇಳಿದರೂ ವಾಹನ ಕಳುಹಿಸುತ್ತೇನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾ ತಂಡಗಳು ಬೇಕಾದರೆ ಕೇಳಿ ನೀಡುತ್ತೇವೆ. ಸಾರಿಗೆ ವ್ಯವಸ್ಥೆಯನ್ನು ವಿಸ್ತರಣೆ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
Leave a comment