Home ದಾವಣಗೆರೆ ರಾಜಕೀಯಕ್ಕೆ ಯಾಕೆ ಬಂದೆಯೆಂದು ಬೇಸರವಾಗುತಿದೆ, ಹಿರಿಯ ಶಾಸಕರ ಪದ ಬಳಕೆ ನೋವು ತಂದಿದೆ: ಶಿವಗಂಗಾ ಬಸವರಾಜ್!
ದಾವಣಗೆರೆ

ರಾಜಕೀಯಕ್ಕೆ ಯಾಕೆ ಬಂದೆಯೆಂದು ಬೇಸರವಾಗುತಿದೆ, ಹಿರಿಯ ಶಾಸಕರ ಪದ ಬಳಕೆ ನೋವು ತಂದಿದೆ: ಶಿವಗಂಗಾ ಬಸವರಾಜ್!

Share
ಶಿವಗಂಗಾ ಬಸವರಾಜ್
Share

ದಾವಣಗೆರೆ: ನಾನು ರಾಜಕೀಯಕ್ಕೆ ಯಾಕೆ ಬಂದೆ ಎಂದು ಬೇಸರವಾಗುತ್ತಿದೆ. ಹಿರಿಯ ಶಾಸಕರ ಪದ ಬಳಕೆ ನೋವು ತಂದಿದೆ. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಅವರು ಮಾತನಾಡಿರುವ ರೀತಿ ಹಾಗೂ ಬಳಸಿರುವ ಪದ ಬಳಕೆ ಯಾವ ಸಂದೇಶ ನೀಡುತ್ತದೆ? ಮಾಧ್ಯಮಗಳಲ್ಲಿ ನೋಡಿದಾಗ ಮನಸ್ಸಿಗೆ ತುಂಬಾನೇ ಬೇಸರವಾಯಿತು. ರಾಜಕೀಯಕ್ಕೆ ಯಾಕೆ ಬರಬೇಕಿತ್ತೆಂದು ಈಗ ಅನಿಸುತ್ತಿದೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಹಾಗೂ ಸಿಎಂ ಡಿ. ಕೆ. ಶಿವಕುಮಾರ್ ಆಪ್ತ ಶಿವಗಂಗಾ ಬಸವರಾಜ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಹಿರಿಯ ನಾಯಕರಿಬ್ಬರ ಪದ ಬಳಕೆ ಈ ಹಂತಕ್ಕೆ ಹೋಗಿರುವುದು ಬೇಸರ ತರಿಸಿದೆ ಎಂದು ಹೇಳಿದರು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ರಾಜಕಾರಣದಲ್ಲಿ ಟೀಕೆ ಟಿಪ್ಪಣಿ ಸಹಜ. ಆರೋಪ ಪ್ರತ್ಯಾರೋಪ ಸಾಮಾನ್ಯ. ಆದರೆ ಕೆಟ್ಟ ಪದಗಳ ಬಳಕೆ, ತಂದೆ ಹೆಸರು ಬಳಕೆ ಸರಿಯಲ್ಲ. ಯಾವುದೇ ಸಮುದಾಯವಿದ್ದರೂ ಇಂಥ ವರ್ತನೆ ಸರಿಯಲ್ಲ. ತಂದೆ, ಕುಟುಂಬ ವಿಚಾರಕ್ಕೆ ಯಾರೂ ಬರಬಾರದು. ಈಗ ಆಗಿರುವ ಘಟನೆಗೆ ವಿಷಾದ ಇದೆ. ಮನಸ್ಸಿಗೆ ಬೇಸರ ಆಗಿದೆ ಎಂದು ತಿಳಿಸಿದರು.

ನಾವು ಸಹ ಆಡು ಭಾಷೆಯಲ್ಲಿ ಮಾತನಾಡುತ್ತೇವೆ. ಇಂಥ ಪದ ಪ್ರಯೋಗ ನಮಗೂ ಮಾಡಿದರೆ ಹೇಗೆ ಎಂಬ ಭಯವಾಗುತ್ತಿದೆ. ಹಿರಿಯರನ್ನು ನಾವು ಫಾಲೋ ಮಾಡಬೇಕು. ಒಳ್ಳೆಯದು ಮಾಡಿದ್ರೂ ಸಹ, ಕೆಟ್ಟದು ಮಾಡಿದ್ರೂ ಸಹ ಎಂಬಾತಾಗಿಬಿಡುತ್ತದೆ. ಇಬ್ಬರೂ ಹಿರಿಯರು. ಮೊದಲು ಯಾರು ಮಾತನಾಡಿದರೂ ಆಮೇಲೆ ಯಾರೂ ಮಾತನಾಡಿದರು ಎಂಬುದು ಮುಖ್ಯವಲ್ಲ. ಎರಡೂ ಪಕ್ಷಗಳ ಹೈಕಮಾಂಡ್ ಇಬ್ಬರಿಗೂ ವೈಯಕ್ತಿಕ, ಕುಟುಂಬದ ಟೀಕೆ ಮಾಡಬಾರದು ಎಂದು ಕಟ್ಟಪ್ಪಣೆ ವಿಧಿಸಬೇಕು. ಇಬ್ಬರನ್ನೂ ಕರೆಸಿ ಮಾತನಾಡಿ ಸಮಸ್ಯೆ ಪರಿಹರಿಸಬೇಕು ಎಂದು ಹೇಳಿದರು.

ರಾಜಕೀಯವಾಗಿ ಮಾತನಾಡಲಿ. ವೈಯಕ್ತಿಕ ಪದಗಳ ಬಳಕೆ ಬೇಡ. ಒಳಗಡೆ ಕೂತು ಮಾತನಾಡಲಿ. ಹೈಕಮಾಂಡ್ ಈ ಕೆಲಸ ಮಾಡಲೇಬೇಕು. ಬಿಜೆಪಿಯವರಿಗೆ ಪ್ರತಿಭಟನೆ, ಹೋರಾಟ ಮಾಡುವುದು ಹಕ್ಕು. ಪ್ರತಿಭಟನೆ ನಡೆಸುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಸಚಿವರು ಇದಕ್ಕೆ ಉತ್ತರ ನೀಡುತ್ತಾರೆ. ದಾವಣಗೆರೆಯಲ್ಲಿ ರಾಜಕೀಯ ಕಲುಷಿತವಾಗದಂತೆ ನೋಡಿಕೊಳ್ಳಬೇಕಿದೆ ಎಂದು ಶಿವಗಂಗಾ ಬಸವರಾಜ್ ಅಭಿಪ್ರಾಯಪಟ್ಟಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles

ಹಿರಿಯ ನಾಯಕರಿಂದಲೇ ಕೀಳುಮಟ್ಟದ ಪದಗಳ ಬಳಕೆ: ಸಮಾಜಕ್ಕೆ ನಾವೇನು ಸಂದೇಶ ನೀಡಬೇಕು? ಶಿವಗಂಗಾ ಬಸವರಾಜ್

ದಾವಣಗೆರೆ: ಏನ್ ಪದಗಳವು. ವರ್ಣಿಸಿ ವರ್ಣಿಸಿ ಮಾಧ್ಯಮದವರ ಬೈಯಬೇಕು. ನಾವು ಅದನ್ನೇ ಕಲಿತರೆ ಹೇಗಾಗುತ್ತೆ. ಸೀನಿಯರ್...

ದಾವಣಗೆರೆ ನೂತನ ಸಿಇಒ ಆಗಿ ಸಾಹಿತ್ಯ ಎಂ. ಆಲದಕಟ್ಟೆ ಅಧಿಕಾರ ಸ್ವೀಕಾರ: ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದೇನು?

ದಾವಣಗೆರೆ: ದಾವಣಗೆರೆ ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸಾಹಿತ್ಯ ಎಂ. ಆಲದಕಟ್ಟೆ ಅವರು ಅಧಿಕಾರ...

ಛೇ… ಸಚಿವರ ಬಾಯಲ್ಲಿ ಇಂಥ ಮಾತು ಬರೋದಾ? ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಿರುದ್ಧ ಎಸ್. ಎಸ್. ಮಲ್ಲಿಕಾರ್ಜುನ್ ಆಕ್ಷೇಪಾರ್ಹ ಪದ ಬಳಸಿ ಕೆಂಡ!

ದಾವಣಗೆರೆ: ಅವನ್ಯಾವನಿಗೋ ಅಣ್ಣ ಅಂತೀಯಾ, ನಿನ್ನ ಸ್ವಂತ ಅಣ್ಣನಿಗೆ ಅಣ್ಣ ಎಂದು ಹೇಳುತ್ತೀಯಾ. ಹೋಗು ಹೋಗು...

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇ – ಸ್ವತ್ತು ತಿದ್ದುಪಡಿಗೆ ಖಾತೆದಾರರ ಅಲೆದಾಟ ತಪ್ಪಿಸಿ: ಎಂ. ಜಿ. ಶ್ರೀಕಾಂತ್ ಒತ್ತಾಯ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ತಿದ್ದುಪಡಿಗೆ ಖಾತೆದಾರರು ಅಲೆದಾಡುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ...

ಫಾಲೋ
ಮಾಡಿ