ದಾವಣಗೆರೆ: ಏನ್ ಪದಗಳವು. ವರ್ಣಿಸಿ ವರ್ಣಿಸಿ ಮಾಧ್ಯಮದವರ ಬೈಯಬೇಕು. ನಾವು ಅದನ್ನೇ ಕಲಿತರೆ ಹೇಗಾಗುತ್ತೆ. ಸೀನಿಯರ್ ಹೇಳಿರುವ ಪದಗಳು ಏನವು? ನಾವು ಸೀನಿಯರ್ ನೋಡಿ ಇಂಥದ್ದೇ ಕಲಿತರೇ ಹೇಗೆ? ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಬಿಜೆಪಿ ಶಾಸಕ ಬಿ. ಪಿ. ಹರೀಶ್ ನಡುವಿನ ಅಸಂವಿಧಾನಿಕ ಪದಗಳ ಬಳಕೆ ವಿವಾದದ ಕುರಿತಂತೆ ಈ ಪ್ರತಿಕ್ರಿಯೆ ನೀಡಿದರು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಇಬ್ಬರೂ ಹಿರಿಯರು. ಈ ರೀತಿಯ ಪದಗಳ ಬಳಕೆ ಮಾಡಿದರೆ ನಾವು ಕಲಿಯುವುದಾದರೂ ಏನು? ಮಾಧ್ಯಮದವರಲ್ಲಿ ಒಳಜಗಳ ಇದೆ ಎಂದುಕೊಳ್ಳೋಣ. ಒಬ್ಬರಿಗೊಬ್ಬರಿಗೆ ಆಗಲ್ಲವೆಂದುಕೊಂಡು ಕೀಳುಮಟ್ಟದ ಪದಗಳ ಬಳಕೆ ಮಾಡಿದರೆ ಸಮಾಜದಲ್ಲಿ ಗೌರವ ಸಿಗುತ್ತದೆಯಾ ಎಂದು ಪ್ರಶ್ನಿಸಿದರು.
ನಾನು ಸಿನಿಮಾಗಳಲ್ಲಿ ನೋಡಿದ್ದೇವೆ. ಧೀರೇಂದ್ರ ಗೋಪಾಲ್ ಸೇರಿದಂತೆ ಕೆಲ ನಟರು ಬಳಸುತ್ತಿದ್ದ ಪದಗಳನ್ನು ಕೇಳಲು ಆಗದಂತಿದ್ದವು. ಆದರೆ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಬಿ. ಪಿ. ಹರೀಶ್ ಇಬ್ಬರೂ ಬಳಸಿರುವ ಪದಗಳು ಸರಿಯಲ್ಲ ಎಂದು ಶಿವಗಂಗಾ ಬಸವರಾಜ್ ಹೇಳಿದರು.
Leave a comment