ದಾವಣಗೆರೆ: ಭದ್ರಾ ಜಲಾನಯನ ಪ್ರದೇಶ ಮತ್ತು ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾದ ಕಾರಣ ಭದ್ರಾ ಡ್ಯಾಂ ಒಳಹರಿವಿನಲ್ಲಿ ಯಥಾ ಸ್ಥಿತಿ ಇದೆ. ಡ್ಯಾಂಗೆ ಇಂದು 2847 ಕ್ಯೂಸೆಕ್ ಒಳಹರಿವಿದೆ. ಹೊರ ಹರಿವಿನಲ್ಲಿ ಹೆಚ್ಚಳವಾಗಿದ್ದು, ಜಲಾಶಯದಿಂದ 1700 ಕ್ಯೂಸೆಕ್ ಹೊರ ಹರಿವಿದೆ.
ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಕಡಿಮೆಯಾಗಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದೆ. ಒಳಹರಿವು 2847 ಕ್ಯೂಸೆಕ್ ಇದ್ದರೆ, ಬಲದಂಡೆ ನಾಲೆಯಲ್ಲಿ 1500 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದ ನೀರಿನ ಮಟ್ಟ ಕಡಿಮೆ ಇದೆ. ಜಲಾಶಯ ಭರ್ತಿಗೆ ಇನ್ನು ಕೇವಲ 7.5 ಅಡಿ ನೀರು ಮಾತ್ರ ಬರಬೇಕು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ:
ಜಲಾಶಯದ ಇಂದಿನ ನೀರಿನ ಮಟ್ಟ: 178.7 ಅಡಿ
ಒಳಹರಿವು: 2847ಕ್ಯೂಸೆಕ್
ಭದ್ರ ಬಲದಂಡೆ ನಾಲೆಗೆ: 1500 ಕ್ಯೂಸೆಕ್
ಸ್ಟೋರೇಜ್ ಕೆಪಾಸಿಟಿ: 62.507 ಟಿಎಂಸಿ
ಇದೇ ದಿನ ಜಲಾಶಯದ ಕಳೆದ ವರ್ಷದ ನೀರಿನ ಮಟ್ಟ:
ನೀರಿನ ಮಟ್ಟ: 184.3 ಅಡಿ
ಒಳ ಹರಿವು: 16,534 ಕ್ಯೂಸೆಕ್
ಹೊರ ಹರಿವು: 14,138 ಕ್ಯೂಸೆಕ್
ಭದ್ರಾ ಮೇಲ್ದಂಡೆ ಯೋಜನೆಯಡಿ ನಾಳೆಯಿಂದ ಚಿತ್ರದುರ್ಗಕ್ಕೆ ನೀರು ಹರಿಸಲು ತೀರ್ಮಾನಿಸಲಾಗಿದ್ದು, ನಾಳೆಯಿಂದ ಡ್ಯಾಂನ ನೀರಿನ ಮಟ್ಟ ಕುಸಿತ ಆಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ ಸುಮಾರು ಆರು ಅಡಿ ನೀರು ಕಡಿಮೆಯಿದೆ. ದಾವಣಗೆರೆ ಜಿಲ್ಲೆಯ ರೈತರು ಭದ್ರಾ ಡ್ಯಾಂನಿಂದ ನೀರು ಹರಿಸುವಂತೆ ಒತ್ತಾಯಿಸಿದ್ದರೂ ಕಾಡಾ ಮಾತ್ರ ಇದುವರೆಗೆ ಕ್ರಮ ಕೈಗೊಂಡಿಲ್ಲ. ರೈತರು ದಾವಣಗೆರೆ ಬಂದ್, ಹೋರಾಟ, ಪ್ರತಿಭಟನೆ ನಡೆಸಿದ್ದರೂ ಸಿಇಸಿ ಸಭೆ ನಡೆಸಿ ನೀರು ಹರಿಸಲು ತೀರ್ಮಾನ ತೆಗೆದುಕೊಳ್ಳದೇ ಇರುವುದು ರೈತರನ್ನು ಕೆರಳುವಂತೆ ಮಾಡಿದೆ.
Leave a comment