ದಾವಣಗೆರೆ: ಸಮಾಜದ ಅಜ್ಞಾನಕ್ಕೆ ಜ್ಞಾನದ ಬೆಳಕು, ಅಸಮಾನತೆಗೆ ಸಮತೆಯ ದಾರಿ, ಹಸಿದವರಿಗೆ ಅನ್ನ, ನಿರ್ಗತಿಕರಿಗೆ ಆಸರೆ ಹಾಗೂ ಗ್ರಾಮೀಣ ಜನತೆಗೆ ಅಕ್ಷರದ ಬೆಳಕು ನೀಡಿದ ಸಮಾಜಾಭ್ಯುದಯದ ನಿರ್ಮಾತೃ, ಶತಮಾನದ ಸಂತಶ್ರೇಷ್ಠ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ 20 ನೆಯ ಪೀಠಾಧಿಪತಿಗಳು,ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾಸನಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಪುಣ್ಯಸ್ಮರಣೆಯ ಅಂಗವಾಗಿ 35 ನೆ ಶ್ರದ್ಧಾಂಜಲಿ ಭಿತ್ತಿಪತ್ರವನ್ನು ಬಿಡುಗಡೆಗೊಂಡಿದೆ.
ಬಸವತತ್ತ್ವವನ್ನು ಕೇವಲ ಬೋಧಿಸದೆ ಬದುಕಿನಲ್ಲಿ ಅಳವಡಿಸಿಕೊಂಡು, ಕಾಯಕ–ದಾಸೋಹ, ಸಮಾನತೆ–ಮಾನವೀಯತೆ ಹಾಗೂ ಜ್ಞಾನ–ವೈಚಾರಿಕತೆಯನ್ನು ಸಮಾಜಮುಖಿ ಬದುಕಿನ ಧ್ಯೇಯವನ್ನಾಗಿಸಿದ ಮಹಾಗುರುವಿನ ಆದರ್ಶಗಳು ಇಂದಿಗೂ ಅಸಂಖ್ಯಾತ ಜನರಿಗೆ ದಾರಿದೀಪವಾಗಿವೆ.
ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ ಸಮಾನತೆ, ವಚನಪ್ರಸಾರ ಹಾಗೂ ಜನಜಾಗೃತಿಯ ಕ್ಷೇತ್ರಗಳಲ್ಲಿ ಅವರು ಬಿತ್ತಿದ ಮೌಲ್ಯಗಳೇ ಅವರ ಅಮರ ಸ್ಮಾರಕಗಳು.
ಭೌತಿಕವಾಗಿ ಗುರುಗಳು ನಮ್ಮೊಂದಿಗಿಲ್ಲದಿದ್ದರೂ, ಅವರ ಚಿಂತನೆ, ಆದರ್ಶ ಮತ್ತು ಸಮಾಜಮುಖಿ ಸೇವೆಯ ಬೆಳಕು ಎಂದಿಗೂ ನಂದುವುದಿಲ್ಲ.
ಈ ಶ್ರದ್ಧಾಂಜಲಿ ಭಿತ್ತಿಪತ್ರವು ಕೇವಲ ಒಂದು ಸ್ಮರಣೆಯ ಸಂಕೇತವಲ್ಲ; ಮಹಾಗುರುವಿನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನುಡಿನಮನದ ದೀಪವಾಗಿದೆ.
“ಶಿವಕುಮಾರರೆಂಬ ಕ್ರಾಂತಿಯ ಜ್ಯೋತಿಗೆ ಕೊನೆಯೆಂಬುದಿಲ್ಲ ಸಾವೆಂಬುದಿಲ್ಲ… ಅದು ಜನಮಾನಸದ ಹೃದಯದಲ್ಲಿ ಎಂದೆಂದಿಗೂ ಬೆಳಗುವ ಅಮರ ಜ್ಯೋತಿ!”
Leave a comment