Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.
Notification
Font ResizerAa
  • ಪ್ರಮುಖ ಸುದ್ದಿ
  • ನಮ್ಮ ದಾವಣಗೆರೆ
  • Crime News
  • Arecanut Rate
  • Crime News
  • Daily News
  • Job News
Reading: ದಾವಣಗೆರೆ: ಅಡಿಕೆ ದರದಲ್ಲಿ ಭರ್ಜರಿ ಚೇತರಿಕೆ, ಗರಿಷ್ಠ ಬೆಲೆ ಕ್ವಿಂಟಲ್‌ಗೆ ₹59,312ಕ್ಕೆ ಏರಿಕೆ
Share
Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.
Font ResizerAa
  • ಪ್ರಮುಖ ಸುದ್ದಿ
  • ನಮ್ಮ ದಾವಣಗೆರೆ
  • Crime News
  • Arecanut Rate
  • Crime News
  • Daily News
  • Job News
Search
  • ಪ್ರಮುಖ ಸುದ್ದಿ
  • ನಮ್ಮ ದಾವಣಗೆರೆ
  • Crime News
  • Arecanut Rate
  • Crime News
  • Daily News
  • Job News
Have an existing account? Sign In
Follow US
Arecanut Rate

ದಾವಣಗೆರೆ: ಅಡಿಕೆ ದರದಲ್ಲಿ ಭರ್ಜರಿ ಚೇತರಿಕೆ, ಗರಿಷ್ಠ ಬೆಲೆ ಕ್ವಿಂಟಲ್‌ಗೆ ₹59,312ಕ್ಕೆ ಏರಿಕೆ

Davanagere Live
Last updated: May 19, 2025 9:35 pm
By Davanagere Live
2 Min Read
Share
Today arecanut price
SHARE

ದಾವಣಗೆರೆ, ಮೇ 19: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರವು ಮತ್ತೆ ಗಮನಾರ್ಹ ಏರಿಕೆ ಕಂಡಿದ್ದು, ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಚನ್ನಗಿರಿ ಮಾರುಕಟ್ಟೆಯಲ್ಲಿ ಇಂದು (ಮೇ 19) ರಾಶಿ ಅಡಿಕೆಯ ಗರಿಷ್ಠ ಬೆಲೆ ಪ್ರತಿ ಕ್ವಿಂಟಲ್‌ಗೆ ₹59,312 ತಲುಪಿದ್ದು, ಕಳೆದ 4-5 ದಿನಗಳಿಂದ ಸತತ ಏರಿಕೆ ಕಾಣುತ್ತಿದೆ. ಈ ರೇಟ್ ನ ಏರಿಕೆಯೊಂದಿಗೆ ದರವು ಮತ್ತೆ ₹60,000 ಗಡಿಯ ಸನಿಹಕ್ಕೆ ತಲುಪಿದೆ.

ಚನ್ನಗಿರಿ ಮಾರುಕಟ್ಟೆಯ ಇಂದಿನ (ಮೇ 19) ಅಡಿಕೆ ರೇಟ್ (ಪ್ರತಿ ಕ್ವಿಂಟಲ್):

ರಾಶಿ ಅಡಿಕೆ:

  • ಗರಿಷ್ಠ ಬೆಲೆ: ₹59,312
  • ಕನಿಷ್ಠ ಬೆಲೆ: ₹54,479
  • ಸರಾಸರಿ ಬೆಲೆ: ₹57,685

ಬೆಟ್ಟೆ ಅಡಿಕೆ:

  • ಗರಿಷ್ಠ ಬೆಲೆ: ₹32,679
  • ಕನಿಷ್ಠ ಬೆಲೆ: ₹27,679
  • ಸರಾಸರಿ ಬೆಲೆ: ₹29,431

ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ ಮತ್ತು ಜಗಳೂರು ತಾಲ್ಲೂಕುಗಳಲ್ಲಿ ಅಡಿಕೆಯು ಪ್ರಮುಖ ಕೃಷಿ ಬೆಳೆಯಾಗಿದೆ. ಪ್ರಸ್ತುತ, ಜಿಲ್ಲೆಯಲ್ಲಿ ಬೇಸಿಗೆಯ ತಾಪಮಾನ ಕಡಿಮೆಯಾಗಿದ್ದು, ಮುಂಗಾರು ಪೂರ್ವ ಮಳೆಯಾಗುತ್ತಿದೆ. ರೈತರು ಮುಂಗಾರು ಮಳೆಯ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಅಡಿಕೆ ದರದ ಏರಿಕೆ

ಈ ವರ್ಷದ ಜನವರಿಯಲ್ಲಿ ಅಡಿಕೆ (ರೇಟ್)  ದರವು ₹52,000 ಒಳಗಿತ್ತು. ಫೆಬ್ರವರಿಯಲ್ಲಿ ಏರಿಕೆಯಾಗಿ ₹53,000 ಗಡಿ ದಾಟಿತು. ಮಾರ್ಚ್ ಆರಂಭದಲ್ಲಿ ಸ್ವಲ್ಪ ಕುಸಿತ ಕಂಡರೂ, ತಿಂಗಳ ಕೊನೆಯಲ್ಲಿ ಮತ್ತೆ ₹53,000 ತಲುಪಿತು. ಏಪ್ರಿಲ್ 23ರಂದು ಗರಿಷ್ಠ ಬೆಲೆ ₹60,669 ತಲುಪಿದ್ದು, ತಿಂಗಳ ಕೊನೆಗೆ ₹59,000 ಒಳಗೆ ಇಳಿಯಿತು. ಮೇ ತಿಂಗಳ ಆರಂಭದಲ್ಲಿ ದರವು ಮತ್ತಷ್ಟು ಕುಸಿದಿದ್ದರೂ, ಈಗ ಮತ್ತೆ ₹59,312ಕ್ಕೆ ಚೇತರಿಸಿಕೊಂಡಿದೆ.

ಕಳೆದ ವರ್ಷ (2024) ಮೇ ತಿಂಗಳಲ್ಲಿ ಗರಿಷ್ಠ ಬೆಲೆ ₹55,000 ಆಗಿತ್ತು, ಆದರೆ 2023ರ ಜುಲೈನಲ್ಲಿ ₹57,000 ತಲುಪಿತ್ತು. ಪ್ರಸ್ತುತ ಏರಿಕೆಯಿಂದ ರೈತರಲ್ಲಿ ಆಶಾಭಾವನೆ ಮೂಡಿದ್ದು, ಮುಂಗಾರು ಮಳೆಯ ಆಗಮನದೊಂದಿಗೆ ಮಾರುಕಟ್ಟೆ ಇನ್ನಷ್ಟು ಚೇತರಿಕೆ ಕಾಣುವ ನಿರೀಕ್ಷೆಯಿದೆ.

ಮುಂದಿನ ದಿನಗಳಲ್ಲಿ ಅಡಿಕೆ ರೇಟ್

ಮುಂಗಾರು ಮಳೆಯ ಪ್ರಗತಿ ಮತ್ತು ಮಾರುಕಟ್ಟೆಯ ಬೇಡಿಕೆಯು ಅಡಿಕೆ ರೇಟ್ ಮೇಲೆ ಮಹತ್ವದ ಪರಿಣಾಮ ಬೀರಲಿದೆ. ಜಿಲ್ಲೆಯ ರೈತರು ಮಾರುಕಟ್ಟೆ ವಹಿವಾಟಿನ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.

 

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ದಾವಣಗೆರೆಲೈವ್‌ gmail

davangere.news@gmail.com

» Whatsapp Number

95903247228

TAGGED:Adike rateadike rate todayAreca nutchannagiri adike ratechannagiri adike rate todayಅಡಿಕೆ ದರಅಡಿಕೆ ರೇಟ್
Share This Article
Facebook Whatsapp Whatsapp Email Print
Davanagere Live's avatar
ByDavanagere Live
Follow:
ದಾವಣಗೆರೆಲೈವ್‌.ಕಾಂ ಕನ್ನಡ ಆನ್‌ಲೈನ್ ನ್ಯೂಸ್ ಪೋರ್ಟಲ್‌ನ ಗುರಿ, ಸ್ಥಳೀಯ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಬೆಣ್ಣೆ ನಗರಿ ದಾವಣಗೆರೆ ಜನರಿಗೆ ತಲುಪಿಸುವುದು. ಸ್ಥಳೀಯ ಮತ್ತು ಮಾಹಿತಿಪೂರ್ಣ ಸುದ್ದಿಗಳಿಗೆ ಮೊದಲ ಆದ್ಯತೆ ನೀಡುತ್ತಾ, ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿಗಳ ಜತೆಗೆ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆಗಳಿಗಾಗಿ ವಾಟ್ಸಾಪ್‌ನಲ್ಲಿ ಸಂಪರ್ಕಿಸಿ. ನಿಮ್ಮೂರಿನ ಸುದ್ದಿಗಳಿದ್ದರೆ ಇಮೇಲ್‌ ಮಾಡಿ. davanagarelive@gmail.com ಅಥವಾ davanagerelive.news@gmail.com
Previous Article Ks Eshwarappa davanagere ನಾನು ಹಾಗೂ ಯತ್ನಾಳ್‌ ಮತ್ತೆ ಬಿಜೆಪಿ ಸೇರುತ್ತೇವೆ: ಕೆ.ಎಸ್‌. ಈಶ್ವರಪ್ಪ 
Next Article Police Sub Inspector Recruitment ಪೊಲೀಸ್ ಸಬ್‍ ಇನ್ಸ್ ಪೆಕ್ಟರ್ ನೇಮಕಾತಿ; ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ
Leave a Comment

Leave a Reply Cancel reply

Your email address will not be published. Required fields are marked *

Gravatar profile

© 2025 Davangere Live. Newbie Techy All Rights Reserved.
Welcome Back!

Sign in to your account

Username or Email Address
Password

Lost your password?