Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.
Notification
Font ResizerAa
  • ಪ್ರಮುಖ ಸುದ್ದಿ
  • ನಮ್ಮ ದಾವಣಗೆರೆ
  • Crime News
  • Arecanut Rate
  • Crime News
  • Daily News
  • Job News
Reading: ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮ ಭೀಕರ ಕೊಲೆ
Share
Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.Davanagere Live | Davanagere News, (ದಾವಣಗೆರೆ ಸುದ್ದಿ) Davanagere News Today, Kannada News. Davangere Crime News, Davanagere Latest News, dvg news, Davanagere News.
Font ResizerAa
  • ಪ್ರಮುಖ ಸುದ್ದಿ
  • ನಮ್ಮ ದಾವಣಗೆರೆ
  • Crime News
  • Arecanut Rate
  • Crime News
  • Daily News
  • Job News
Search
  • ಪ್ರಮುಖ ಸುದ್ದಿ
  • ನಮ್ಮ ದಾವಣಗೆರೆ
  • Crime News
  • Arecanut Rate
  • Crime News
  • Daily News
  • Job News
Have an existing account? Sign In
Follow US
Crime News

ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮ ಭೀಕರ ಕೊಲೆ

Davanagere Live
Last updated: May 5, 2025 10:03 pm
By Davanagere Live
2 Min Read
Share
Rowdysheeter Santosh Kumar alias Kanuma brutally murdered
SHARE

ದಾವಣಗೆರೆ: ನಗರದ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗದಲ್ಲಿ ಕುಖ್ಯಾತ ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ ಕಣುಮ, ಸೆಟಲ್‌ಮೆಂಟ್ ವಿಚಾರಗಳಲ್ಲಿ ಗುರುತಿಸಿಕೊಂಡಿದ್ದರು. ಆಟೋದಲ್ಲಿ ಬಂದ ನಾಲ್ಕೈದು ಜನರ ಗುಂಪು, ಮಚ್ಚು ಮತ್ತು ಇತರ ಮಾರಕಾಸ್ತ್ರಗಳಿಂದ ಕಣುಮಾ ಅವರನ್ನು ಕೊಚ್ಚಿ, ಮುಖಕ್ಕೆ ಪೇಪರ್ ಸ್ಪ್ರೇ ಹೊಡೆದು ಭೀಕರವಾಗಿ ಕೊಲೆಗೈದಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಐಜಿಪಿ, ಎಸ್ಪಿ ಉಮಾ ಪ್ರಶಾಂತ್, ಶ್ವಾನದಳ ಸೇರಿದಂತೆ ಪೊಲೀಸ್ ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.

ಕಿರಿಯ ವಯಸ್ಸಿನಲ್ಲೇ ದಾವಣಗೆರೆಯಲ್ಲಿ ಭಾರೀ ಖ್ಯಾತಿ ಗಳಿಸಿದ್ದ ಸಂತೋಷ್ ಕುಮಾರ್ ಅಲಿಯಾಸ್ ಕಣುಮ, ಮಹಾನಗರ ಪಾಲಿಕೆ ಸದಸ್ಯರಾಗುವ ಕನಸು ಕಂಡಿದ್ದರು. ಆದರೆ, ಆ ಕನಸು ಈಡೇರದಂತೆ ದುಷ್ಕರ್ಮಿಗಳು ಅವರನ್ನು ಭೀಕರವಾಗಿ ಕೊಲೆಗೈದಿದ್ದಾರೆ.

ಮುಖಕ್ಕೆ ಪೇಪರ್ ಸ್ಪ್ರೇ ಹೊಡೆದು ಕೊಲೆ

ನಗರದ ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎದುರಿನ ಕಲ್ಲೇಶ್ವರ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಪಕ್ಕದ ಜಿಮ್ ಸಮೀಪದ ಕ್ಲಬ್‌ಗೆ ಆಟೋದಲ್ಲಿ ಬಂದ ನಾಲ್ಕೈದು ಜನರ ಗುಂಪು ನುಗ್ಗಿದೆ. ಹಂತಕರು ಮೊದಲಿಗೆ ಕಣುಮ ಅವರ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ. ಕೈ, ಕಾಲು ಮತ್ತು ದೇಹಕ್ಕಿಂತಲೂ ಹೆಚ್ಚಾಗಿ ತಲೆ ಹಾಗೂ ಕುತ್ತಿಗೆಗೆ ಮಚ್ಚು ಮತ್ತು ಇತರ ಆಯುಧಗಳಿಂದ ತೀವ್ರವಾಗಿ ಥಳಿಸಿ, ಮುಖಕ್ಕೆ ಪೇಪರ್ ಸ್ಪ್ರೇ ಹೊಡೆದು ಕೊಲೆಗೈದಿದ್ದಾರೆ. ರಕ್ತಸಿಕ್ತ ಸ್ಥಳದ ದೃಶ್ಯವು ಕೃತ್ಯದ ಭೀಕರತೆಯನ್ನು ಎತ್ತಿ ತೋರಿಸಿದೆ. ಕೊಲೆಗಾರರು ಘಟನೆಯ ಬಳಿಕ ಪರಾರಿಯಾಗಿದ್ದಾರೆ.

ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕ
ಕಳೆದ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದ ಕಣುಮ, ವಾರ್ಡ್ ಮಹಿಳೆಯರಿಗೆ ಮೀಸಲಾದ ಕಾರಣ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಆದರೆ, ತಮ್ಮ ಅತ್ತೆಯನ್ನು ಸ್ಪರ್ಧೆಗಿಳಿಸಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ನಿಟ್ಟುವಳ್ಳಿಯ ಹೊಸ ಬಡಾವಣೆಯ ನಿವಾಸಿಯಾಗಿದ್ದ ಕಣುಮ, ಬುಳ್ ನಾಗನ ಹತ್ಯೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರಿಂದ ‘ಕಣುಮ’ ಎಂಬ ಹೆಸರು ಜನಪ್ರಿಯವಾಗಿತ್ತು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ ಕಣುಮ, ಜಮೀನು ಸೆಟಲ್‌ಮೆಂಟ್ ವಿಚಾರಗಳಲ್ಲಿ ಗುರುತಿಸಿಕೊಂಡಿದ್ದರು. ಕೆಲ ತಿಂಗಳ ಹಿಂದೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಬೆದರಿಕೆ ಪ್ರಕರಣ ದಾಖಲಾಗಿತ್ತು. ಬುಳ್ ನಾಗನ ಹತ್ಯೆಯ ನಂತರ ಸಂತೋಷ್ ಸಾಮಾಜಿಕ ಸೇವೆ ಮತ್ತು ಸಂಘಟನೆಗಳಲ್ಲಿ ತೊಡಗಿಕೊಂಡಿದ್ದರು. ತಮ್ಮ ಜನ್ಮದಿನದಂದು ಜಯದೇವ ವೃತ್ತದಲ್ಲಿ ದೊಡ್ಡ ಬ್ಯಾನರ್‌ಗಳು ಮತ್ತು ಬಂಟಿಂಗ್ಸ್‌ ಅಳವಡಿಸಿದ್ದರು. ಇದಲ್ಲದೆ, ಉಚ್ಚಿಂಗಿದುರ್ಗದ ಸಮೀಪದಲ್ಲಿ ಬಾಡಿಬಿಲ್ಡರ್ ಒಬ್ಬರ ಹತ್ಯೆ ಪ್ರಕರಣದಲ್ಲಿ ಕಣುಮ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ದಾವಣಗೆರೆಲೈವ್‌ gmail

davangere.news@gmail.com

» Whatsapp Number

95903247228

TAGGED:davanagere crimeDavanagere NewsKanuma murderedಕಣುಮ ಕೊಲೆಕಣುಮ ಭೀಕರ ಕೊಲೆ
Share This Article
Facebook Whatsapp Whatsapp Email Print
Davanagere Live's avatar
ByDavanagere Live
Follow:
ದಾವಣಗೆರೆಲೈವ್‌.ಕಾಂ ಕನ್ನಡ ಆನ್‌ಲೈನ್ ನ್ಯೂಸ್ ಪೋರ್ಟಲ್‌ನ ಗುರಿ, ಸ್ಥಳೀಯ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಬೆಣ್ಣೆ ನಗರಿ ದಾವಣಗೆರೆ ಜನರಿಗೆ ತಲುಪಿಸುವುದು. ಸ್ಥಳೀಯ ಮತ್ತು ಮಾಹಿತಿಪೂರ್ಣ ಸುದ್ದಿಗಳಿಗೆ ಮೊದಲ ಆದ್ಯತೆ ನೀಡುತ್ತಾ, ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿಗಳ ಜತೆಗೆ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆಗಳಿಗಾಗಿ ವಾಟ್ಸಾಪ್‌ನಲ್ಲಿ ಸಂಪರ್ಕಿಸಿ. ನಿಮ್ಮೂರಿನ ಸುದ್ದಿಗಳಿದ್ದರೆ ಇಮೇಲ್‌ ಮಾಡಿ. davanagarelive@gmail.com ಅಥವಾ davanagerelive.news@gmail.com
Previous Article Shantha from Davangere scores 94% in SSLC despite overcoming blood cancer ಬ್ಲಡ್ ಕ್ಯಾನ್ಸರ್ ಮೆಟ್ಟಿ ಎಸ್ಎಸ್ಎಲ್‌ಸಿಯಲ್ಲಿ 94% ಗಳಿಸಿದ ದಾವಣಗೆರೆಯ ಶಾಂತ
Next Article Today arecanut price Adike Rate : ಚನ್ನಗಿರಿ ಇಂದಿನ ಅಡಿಕೆ ರೇಟ್‌ | ವಿವಿಧ ಮಾರುಟ್ಟೆಗಳ ವಿವರ
Leave a Comment

Leave a Reply Cancel reply

Your email address will not be published. Required fields are marked *

Gravatar profile

© 2025 Davangere Live. Newbie Techy All Rights Reserved.
Welcome Back!

Sign in to your account

Username or Email Address
Password

Lost your password?