Home Daily News ಒನಕೆ ಓಬವ್ವ, ಚನ್ನಗಿರಿ ಕೋಟೆ ಪ್ರಗತಿಗೆ ಆಗ್ರಹ; ಹಷಾಜಿ ಸಮಾಧಿ ಅಭಿವೃದ್ಧಿಗೆ ಮೀಸಲಿಟ್ಟ ಹಣ ವಾಪಸ್ ಪಡೆಯಲು ಒತ್ತಾಯ
Daily News

ಒನಕೆ ಓಬವ್ವ, ಚನ್ನಗಿರಿ ಕೋಟೆ ಪ್ರಗತಿಗೆ ಆಗ್ರಹ; ಹಷಾಜಿ ಸಮಾಧಿ ಅಭಿವೃದ್ಧಿಗೆ ಮೀಸಲಿಟ್ಟ ಹಣ ವಾಪಸ್ ಪಡೆಯಲು ಒತ್ತಾಯ

Share
Shahaji Tomb, Channagiri Fort, Channagiri, Protest, Davangere News, Davangere Live,
Share

ಚನ್ನಗಿರಿ: ಚನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿರುವ ಮರಾಠ ದೊರೆ ಷಹಜಿ ಮಹಾರಾಜರ ಸಮಾಧಿ ಸ್ಥಳದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಚೆಗೆ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ೫ ಕೋಟಿ ರೂಪಾಯಿ ಹಣ ಮೀಸಲಿರಿಸಿದ್ದರು. ಈಗ ಅದಕ್ಕೆ ಕೆಲ ಸಂಘಟನೆಗಳಿAದ ವಿರೋಧ ವ್ಯಕ್ತವಾಗಿದ್ದು, ಅನುದಾನ ವಾಪಸ್ ಪಡೆಯುವಂತೆ ಆಗ್ರಹ ವ್ಯಕ್ತವಾಗಿದೆ.

ಕರ್ನಾಟಕ ನವನಿರ್ಮಾಣ ಸೇನೆ ಚಿತ್ರದುರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದು, ರಾಜ್ಯ ಬಜೆಟ್ ನಲ್ಲಿ ಷಹಾಜಿ ಸಮಾಧಿ ಅಭಿವೃದ್ಧಿಗೆ ನೀಡಿರುವ ೫ ಕೋಟಿ ಹಣ ಮರಳಿ ಪಡೆದು ವೈರಿಪಡೆಗಳಿಂದ ಚಿತ್ರದುರ್ಗದ ಕೋಟೆಯನ್ನು ರಕ್ಷಣೆ ಮಾಡಿದ ವೀರ ವನಿತೆ ಒನಕೆ ಓಬವ್ವಳ ಸಮಾಧಿ ಸ್ಥಳ ಅಭಿವೃದ್ಧಿಪಡಿಸಲು ನೀಡುವಂತೆ ಆಗ್ರಹಿಸಿದರು.

ರಾಜ್ಯ ಸರ್ಕಾರ ಕನ್ನಡ ನಾಡಿನ ರಕ್ಷಣೆಗೆ ಹೋರಾಟ ನಡೆಸಿದ ಮಹನೀಯರ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು. ಅದರಿಂದ ಮರಾಠ ದೊರೆ ಷಹಾಜಿ ಮಹರಾಜರ ಸಮಾಧಿ ಸ್ಥಳದ ಪ್ರಗತಿಗೆ ಮೀಸಲಿಟ್ಟ ಹಣವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ದಾವಣಗೆರೆ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಕೆಳದಿಯ ವೀರ ರಾಣಿ ಚೆನ್ನಮ್ಮ ಕಟ್ಟಿಸಿದ ಚನ್ನಗಿರಿ ಕೋಟೆ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಪ್ರತಿಭಟಿಸಿ ಮನವಿ ಸಲ್ಲಿಸಿದರು.

 

Share

Leave a comment

Leave a Reply

Your email address will not be published. Required fields are marked *

Related Articles
Protest demanding that B.H. Veerabhadrappa be given a seat in the Legislative Council
Daily News

ಬಿ.ಎಚ್. ವೀರಭದ್ರಪ್ಪ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ದಾವಣಗೆರೆ: ಕಾಗ್ರೇಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಬಿ. ಎಚ್. ವೀರಭದ್ರಪ್ಪ ಅವರಿಗೆ ವಿಧಾನ...

Davanagere assembly elections excise department fake liquor
Daily News

ಕದ್ದು ಮದ್ಯ ಮಾರಾಟ ಮಾಡಿದರೆ ಹುಷಾರ್; ಅಬಕಾರಿ ಇಲಾಖೆ ಖಡಕ್ ವಾರ್ನಿಂಗ್

ದಾವಣಗೆರೆ: 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಏಪ್ರಿಲ್ ಅಥವಾ ಮೇ ತಿಂಗಳುಗಳಲ್ಲಿ ನಡೆಯಲಿದ್ದು, ಚುನಾವಣಾ...

government employee strike 2023 karnataka
Daily News

ಸರಕಾರಿ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ನಿವೃತ್ತ ಪರಿಸರ ಅಧಿಕಾರಿ ಕೊಟ್ರೇಶ್ ಬೆಂಬಲ

ದಾವಣಗೆರೆ : ಏಳನೇ ವೇತನ ಆಯೋಗ ಜಾರಿ ಬರಲು ಸರಕಾರಿ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ನಿವೃತ್ತ...

Application Invitation Davangere News
Daily News

ಅಂಗವಿಕಲ ವಿದ್ಯಾರ್ಥಿಗಳಿಗೆ ಇಲ್ಲಿದೆ ಅವಕಾಶ

ದಾವಣಗೆರೆ: ಮೈಸೂರಿನ ಜೆ.ಎಸ್.ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಹಾಗೂ ಜೆ.ಎ¸.ï‌ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಛಯದಿಂದ ಎಸ್.ಎಸ್.ಎಲ್.ಸಿ...