Home Daily News ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಮಾಯಾಂಬಿಕಾ ದೇವಿ ಅಡ್ಡಪಲ್ಲಕ್ಕಿ ಮಹೋತ್ಸವ: ಮಾಜಿ ಶಾಸಕ ಶಾಂತನಗೌಡ ಭಾಗಿ
Daily News

ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಮಾಯಾಂಬಿಕಾ ದೇವಿ ಅಡ್ಡಪಲ್ಲಕ್ಕಿ ಮಹೋತ್ಸವ: ಮಾಜಿ ಶಾಸಕ ಶಾಂತನಗೌಡ ಭಾಗಿ

Share
Honnali Shantanagowda Jatre
Share

DAVANAGERE NEWS TODAY | KANNADA NEWS | 07-02-2023


ಹೊನ್ನಾಳಿ:
ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀ ಮಾಯಾಂಬಿಕಾ ದೇವಿಯ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮ, ಸಡಗರದಿಂದ ನೆರವೇರಿತು.

ಮಾಯಾಂಬಿಕಾ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಿಂದ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ’’ತಾಯಂದಿರಿಗೊAದು ನಮನ’’ ಕಾರ್ಯಕ್ರಮವನ್ನು ಮಾಜಿ ಶಾಸಕ ಶಾಂತನಗೌಡ ಉದ್ಘಾಟಿಸಿದರು.

ಯಕ್ಕನಹಳ್ಳಿ ಗ್ರಾಮ ಒಗ್ಗಟ್ಟಿಗೆ, ಭಕ್ತಿಗೆ ಹೆಸರಾಗಿದೆ. ಎಲ್ಲರೂ ಪರಸ್ಪರ ಸಹಕಾರ ಮನೋಭಾವನೆಯಿಂದ ದೇವಸ್ಥಾನದ ಕೆಲಸ ಮಾಡುವ ಮೂಲಕ ಶ್ರೀ ಮಾಯಾಂಬಿಕಾ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ ಎಂದು ಮಾಜಿ ಶಾಸಕ ಶಾಂತನಗೌಡ ಹೇಳಿದರು.

ಮಾಯಾಂಬಿಕಾ ದೇವಿಯ ಮಹಿಮೆ ಅನಂತವಾದದ್ದು, ಭಕ್ತಿಯಿಂದ ಬೇಡಿ ಬರುವ ಭಕ್ತರನ್ನು ದೇವಿ ಹರಸುತ್ತಾಳೆ. ದೇವಿಗೆ ನಡೆದುಕೊಳ್ಳುವ ಅನೇಕ ಭಕ್ತರು ಒಳಿತನ್ನು ಕಂಡಿದ್ದಾರೆ. ತಮಗೆ ಒಳಿತಾದ ಬಳಿಕ ಭಕ್ತರು ದೇವಸ್ಥಾನಕ್ಕೆ ತಮ್ಮ ಕೈಲಾದ ಮಟ್ಟಿಗೆ ಹರಕೆ-ಕಾಣಿಕೆ ಅರ್ಪಿಸಿದ್ದಾರೆ ಎಂದು ತಿಳಿಸಿದರು.

‘‘ತಾಯಂದಿರಿಗೊAದು ನಮನ’’ ವಿಶಿಷ್ಟ ಕಾರ್ಯಕ್ರಮವಾಗಿದೆ. ಕೌಟುಂಬಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ, ಸಮಾಜದ ನಾನಾ ಕ್ಷೇತ್ರಗಳಲ್ಲೂ ಅನನ್ಯ ಸಾಧನೆ ಮಾಡುವ ಮಹಿಳೆಯರನ್ನು ಯಕ್ಕನಹಳ್ಳಿ ಗ್ರಾಮಸ್ಥರು ಸನ್ಮಾನಿಸುತ್ತಿರುವುದು ಮಾದರಿಯಾಗಿದೆ ಎಂದು ಮಾಜಿ ಶಾಸಕ ಶಾಂತನಗೌಡ ಶ್ಲಾಘಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles
Protest demanding that B.H. Veerabhadrappa be given a seat in the Legislative Council
Daily News

ಬಿ.ಎಚ್. ವೀರಭದ್ರಪ್ಪ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ದಾವಣಗೆರೆ: ಕಾಗ್ರೇಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಬಿ. ಎಚ್. ವೀರಭದ್ರಪ್ಪ ಅವರಿಗೆ ವಿಧಾನ...

Davanagere assembly elections excise department fake liquor
Daily News

ಕದ್ದು ಮದ್ಯ ಮಾರಾಟ ಮಾಡಿದರೆ ಹುಷಾರ್; ಅಬಕಾರಿ ಇಲಾಖೆ ಖಡಕ್ ವಾರ್ನಿಂಗ್

ದಾವಣಗೆರೆ: 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಏಪ್ರಿಲ್ ಅಥವಾ ಮೇ ತಿಂಗಳುಗಳಲ್ಲಿ ನಡೆಯಲಿದ್ದು, ಚುನಾವಣಾ...

government employee strike 2023 karnataka
Daily News

ಸರಕಾರಿ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ನಿವೃತ್ತ ಪರಿಸರ ಅಧಿಕಾರಿ ಕೊಟ್ರೇಶ್ ಬೆಂಬಲ

ದಾವಣಗೆರೆ : ಏಳನೇ ವೇತನ ಆಯೋಗ ಜಾರಿ ಬರಲು ಸರಕಾರಿ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ನಿವೃತ್ತ...

Application Invitation Davangere News
Daily News

ಅಂಗವಿಕಲ ವಿದ್ಯಾರ್ಥಿಗಳಿಗೆ ಇಲ್ಲಿದೆ ಅವಕಾಶ

ದಾವಣಗೆರೆ: ಮೈಸೂರಿನ ಜೆ.ಎಸ್.ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಹಾಗೂ ಜೆ.ಎ¸.ï‌ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಛಯದಿಂದ ಎಸ್.ಎಸ್.ಎಲ್.ಸಿ...