Home ಪ್ರಮುಖ ಸುದ್ದಿ ನೀರಿಲ್ಲದೆ ಒಣಗುತ್ತಿವೆ ಭತ್ತದ ಪೈರು; ಕಾಡಾ ಅಧ್ಯಕ್ಷೆಯಿಂದ ಅಧಿಕಾರಿಗಳಿಗೆ ವಾರ್ನಿಂಗ್ !
ಪ್ರಮುಖ ಸುದ್ದಿ

ನೀರಿಲ್ಲದೆ ಒಣಗುತ್ತಿವೆ ಭತ್ತದ ಪೈರು; ಕಾಡಾ ಅಧ್ಯಕ್ಷೆಯಿಂದ ಅಧಿಕಾರಿಗಳಿಗೆ ವಾರ್ನಿಂಗ್ !

Share
KADA President Pavitra Ramaiah
Share

ದಾವಣಗೆರೆ ಲೈವ್, ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿಲ್ಲದೆ ಭತ್ತ ಪೈರುಗಳು ಒಣಗುವ ಹಂತಕ್ಕೆ ತಲುಪಿಸಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರು ಭತ್ತದ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಲವು ದಿನಗಳಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಜಮೀನುಗಳಿಗೆ ನೀರಿಲ್ಲದೆ ನಾಟಿ ಮಾಡಿದ್ದ ಭತ್ತದ ಪೈರು ಒಣಗುತ್ತಿವೆ. ಇದರಿಂದ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಕೂಡಲೇ ಭದ್ರಾ ಜಲಾಶಯದಿಂದ ನೀರು ಹರಿಸಿ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡಸಲಾಗಿತ್ತು. ಬುಧವಾರ ಭತ್ತದ ಗದ್ದೆಗಳಿಗೆ ಕಾಡಾ ಅಧ್ಯಕ್ಷ್ಷೆ ಪವಿತ್ರಾ ರಾಮಯ್ಯ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ಭರವಸೆ ನೀಡಿತು.

ಅಧಿಕಾರಿಗಳಿಗೆ ಕಾಡಾ ಅಧ್ಯಕ್ಷೆ ತರಾಟೆ

ಭದ್ರಾ ಜಲಾಶಯದಿಂದ ನೀರು ಹರಿಸುವಲ್ಲಿ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ನಾಲ್ಕು ದಿನದೊಳಗೆ ರೈತರಿಗೆ ನೀರು ಪೂರೈಸಿ ಇಲ್ಲದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಖಡಕ್ ವಾರ್ನಿಂಗ್ ನೀಡಿದರು.

 

Share

Leave a comment

Leave a Reply

Your email address will not be published. Required fields are marked *

Related Articles
Mango cultivation decline Davangere
ಪ್ರಮುಖ ಸುದ್ದಿ

ದಾವಣಗೆರೆ ಜಿಲ್ಲೆಯಲ್ಲಿ ಮಾವಿನ ಬೇಸಾಯ ಕುಸಿತ: ಅಡಿಕೆ ಬೆಳೆಯತ್ತ ರೈತರ ಒಲವು

ದಾವಣಗೆರೆ, ಏಪ್ರಿಲ್ 04, 2025: ಮಾವಿನ ಬೇಸಾಯ ಕುಸಿತ-ದಾವಣಗೆರೆ ಜಿಲ್ಲೆಯಲ್ಲಿ ಮಾವಿನ ಬೇಸಾಯವು (Mango cultivation)...

ಪ್ರಮುಖ ಸುದ್ದಿ

ಬಹುಮಾನ ಬಂದಿದೆ ಎಂದು ನಂಬಿಸಿ ವಂಚನೆ: ದಾವಣಗೆರೆ ವ್ಯಕ್ತಿಗೆ ಶಾಕ್

ದಾವಣಗೆರೆ: ಮೆಶೊ ಶಾಪಿಂಗ್‌ ಲಿಮಿಟೆಡ್‌ನಿಂದ ಬಹುಮಾನದ ಹಣ ಬಂದಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ₹ 25,000...

davanagere sp ryshyanth
ಪ್ರಮುಖ ಸುದ್ದಿ

ಪತ್ರಕರ್ತನ ವಶ ಪ್ರಕರಣ: ಭದ್ರತೆಗಿದ್ದ ಬ್ಯಾರಿಕೇಡ್ ದಾಟಿ ಬಂದಿದ್ದೇಕೆ: ಎಸ್ಪಿ ಸಿ.ಬಿ.ರಿಷ್ಯಂತ್ ಪ್ರಶ್ನೆ

ದಾವಣಗೆರೆ : ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ಪತ್ರಕರ್ತರೊಬ್ಬರನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂಬ ವಿಷಯಕ್ಕೆ...

Renukacharya Dance, Tagaru Song, Nyamati,
ಪ್ರಮುಖ ಸುದ್ದಿ

ಟಗರು ಬಂತು ಟಗರು ಸಾಂಗಿಗೆ ಎಂ.ಪಿ.ರೇಣುಕಾಚಾರ್ಯ ಸಕತ್ ಸ್ಟೆಪ್; ಶಾಸಕರ ಡ್ಯಾನ್ಸ್ ಗೆ ಅಭಿಮಾನುಗಳು ಫಿದಾ !

ದಾವಣಗೆರೆ ಲೈವ್, ಹೊನ್ನಾಳಿ: ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಶಾಸಕ ರೇಣುಕಾಚಾರ್ಯ ಅವರ...